ವಿದ್ಯಾಮಾನ್ಯ ನಗರ, ಕಾಳಿಕಾನಗರ, ಓಂಕಾರನಗರ, ಶ್ರೀ ರಾಘವೇಂದ್ರ ನಗರ, ಆಂದ್ರಹಳ್ಳಿ, ಡಿ ಗ್ರೂಪ್ ಎಂಪ್ಲಾಯಿಸ್ ಕಾಲೋನಿಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವವರು ಬಡವರು, ಮಧ್ಯಮ ವರ್ಗದವರು. ಇವರೆಲ್ಲ ಸರ್ಕಾರಿ ಸೌಕರ್ಯ ಸರಿಯಾಗಿ ದೊರೆಯದ ಕಾರಣ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆಯುವ ಸ್ಥಿತಿಯಿದೆ. ಬಡವರಂತೂ ಹಣ ತೆರಲಾಗದೇ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.
ಇದೇ ರೀತಿ ಇಲ್ಲಿ ಅಂಚೆ ಕಚೇರಿಯೂ ಇಲ್ಲದೆ ತೊಂದರೆಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಚೆ ಕಚೇರಿಯನ್ನು ಆದಷ್ಟು ಬೇಗ ತೆರೆಯಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ ಎಂದು ಮನವಿ.