ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವೇ ಭಾಗ್ಯ ದಿನಾಚರಣೆ: ಮಕ್ಕಳಿಗೆ ಕ್ರೀಡಾ ಸ್ಪರ್ಧೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ನೆಲಮಂಗಲ: `ನಿಮ್ಮ ಮಕ್ಕಳು ನಿಮ್ಮವರಲ್ಲ, ನಿಮ್ಮಡನಿದ್ದರೂ ನಿಮಗಷ್ಟೇ ಸಂಬಂಧಪಟ್ಟವರಲ್ಲ, ಅವರು ಅವರದೇ ಕನಸಲ್ಲಿ ಬದುಕಲಿ~ ಎಂದು ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಸುರೇಶ್ ಆಳ್ವ ತಿಳಿಸಿದರು.

ಸ್ಥಳೀಯ ಹರ್ಷ ಸಮೂಹ ಸಂಸ್ಥೆಯ ಯೂರೊ ಕಿಡ್ಸ್ ವತಿಯಿಂದ ಏರ್ಪಡಿಸಿದ್ದ ಆರೋಗ್ಯವೇ ಭಾಗ್ಯ ದಿನಾಚರಣೆಯ ಒಲಂಪಿಕ್ಸ್ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ಕೊಡಬಹುದು ಆಲೋಚನೆಗಳನ್ನಲ್ಲ ಎಂದರು.

 ದಿನಾಚರಣೆ ಬಗ್ಗೆ ಮಾಸ್ಟರ್ ಎಸ್.ಆರ್.ಯಶಸ್, ಹಂಸಶೇಖ್ ಭಟ್ ಮಾತನಾಡಿದರು. ಎಲ್.ಮೋಹಿತ್ ಸಂದೇಶ ವಾಚಿಸಿದರು. ಕ್ರೀಡಾ ವಿಜೇತರಿಗೆ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಶಸ್ತಿ ಪತ್ರ ವಿತರಿಸಿದರು.

ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಗಿರಿಜಾ ಶಿವಕುಮಾರ್ ನಗದು ಬಹುಮಾನ ವಿತರಿಸಿದರು.

ಮುಖ್ಯಶಿಕ್ಷಕಿ ಪೂರ್ಣಿಮಾ ಪ್ರತಿಭಾನ್ವಿತರನ್ನು ಪರಿಚಯಿಸಿದರು. ವಿವಿಧ ಸ್ಪರ್ಧೆಗಳನ್ನು ಮಕ್ಕಳಿಗೆ, ಪಾಲಕರಿಗೆ ಏರ್ಪಡಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT