ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ: ಟೈಟ್ಲರ್

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ದೇಶದಲ್ಲಿ 1984ರಲ್ಲಿ ನಡೆದ  ಸಿಖ್ ವಿರೋಧಿ ದಂಗೆಯಲ್ಲಿ ತಮ್ಮ  ಪಾತ್ರವಿದೆ ಎಂಬ ಆರೋಪ ಸಾಬೀತಾದರೆ ರಾಜಕಾರಣದಿಂದ ದೂರ ಸರಿಯುವುದಾಗಿ ಕಾಂಗ್ರೆಸ್ ಮುಖಂಡ  ಜಗದೀಶ್ ಟೈಟ್ಲರ್ ಹೇಳಿದ್ದಾರೆ.

`ಪ್ರಕರಣದ ಸಾಕ್ಷಿಗಳು ಸಾಕಷ್ಟು ಬಾರಿ ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದಾರೆ. ನಾನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲು ಸಿದ್ಧ. ಧೈರ್ಯವಿದ್ದರೆ  ಅವರು (ಸಾಕ್ಷಿಗಳು) ಪರೀಕ್ಷೆಗೆ ಒಳಪಡಲಿ' ಎಂದು ಟೈಟ್ಲರ್ ಸವಾಲು ಹಾಕಿದ್ದಾರೆ.

`ನ್ಯಾಯಾಲಯ ನನ್ನ ಮೇಲೆ  ಆರೋಪ ಸಿದ್ಧಪಡಿಸಿದರೆ  ಆ ಕ್ಷಣವೇ ಪಕ್ಷ ನೀಡಿರುವ ಎಲ್ಲ ಸ್ಥಾನ ಗಳನ್ನು ತ್ಯಜಿಸುತ್ತೇನೆ. ಪಕ್ಷಕ್ಕೂ ಮುಖ ತೋರಿಸು ವುದಿಲ್ಲ. ನನ್ನಿಂದಾಗಿ ಪಕ್ಷಕ್ಕೆ ಮುಜುಗರವಾಗುವುದ ಬೇಡ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ನಾನು ಭಾವಿಸಿದ್ದೇನೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT