ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರ್ಕ್ಟಿಕ್ ಉಳಿಸಿ' ಕಾರ್ಯಕ್ರಮ

Last Updated 20 ಏಪ್ರಿಲ್ 2013, 19:54 IST
ಅಕ್ಷರ ಗಾತ್ರ

ಬೆಂಗಳೂರು: ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ `ಐ ಲವ್ ಆರ್ಕ್ಟಿಕ್' ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಿತ್ತು.

ವಿಶ್ವದಲ್ಲಿ ಹೆಚ್ಚುತ್ತಿರುವ ತಾಪಮಾನದ ಪರಿಣಾಮ ಆರ್ಕ್ಟಿಕ್ ದ್ವೀಪದ ಮಂಜುಗಡ್ಡೆಯು ದಿನದಿಂದ ದಿನಕ್ಕೆ ಕರಗುತ್ತಿದೆ. ಇದರಿಂದ `ಆರ್ಕ್ಟಿಕ್ ಉಳಿಸಿ' ಎಂಬ ಘೋಷಣೆಯೊಂದಿಗೆ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ.

`ಜಾಗೃತಿ ಕಾರ್ಯಕ್ರಮದಲ್ಲಿ 30 ದೇಶಗಳಿಂದ ಸಾವಿರಾರು ಜನರು ಭಾಗವಹಿಸಿದ್ದಾರೆ. ವಿಶ್ವ ಭೂ ದಿನಾಚರಣೆಯಲ್ಲಿ ಎಲ್ಲರೂ ವಿಶ್ವವನ್ನು ಉಳಿಸುವತ್ತ ಹೆಜ್ಜೆ ಹಾಕಬೇಕಿದೆ. ಏಕೆಂದರೆ, ಆರ್ಕ್ಟಿಕ್ ದ್ವೀಪದ ಮಂಜುಗಡ್ಡೆ ಕರಗಿದರೆ ವಿಶ್ವಕ್ಕೆ ಆಪತ್ತು ಒದಗಲಿದೆ' ಎಂದು ಗ್ರೀನ್ ಪೀಸ್ ಸಂಸ್ಥೆಯ ಸಂಚಾಲಕ ಮಹಾಲಯ ಹೇಳಿದರು.

`ವಿಶ್ವದಲ್ಲಿ 2.7 ಮಿಲಿಯನ್ ಜನರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆರ್ಕ್ಟಿಕ್ ದ್ವೀಪದ ಉಷ್ಣತೆಯು 2 ಡಿಗ್ರಿಯಿಂದ 5 ಡಿಗ್ರಿವರೆಗೆ ಹೆಚ್ಚಿದೆ. ಇದು ನಮಗೆ ಅಪಾಯದ ಮುನ್ಸೂಚನೆಯಾಗಿದೆ. ಈ ಕುರಿತು ಅಂತರರಾಷ್ಟ್ರೀಯ ನಾಯಕರು ಚಿಂತನೆ ನಡೆಸಬೇಕಾಗಿದೆ' ಎಂದು ಗ್ರೀನ್‌ಪೀಸ್ ಸಂಸ್ಥೆಯ ಸಂಚಾಲಕ ಸದಸ್ಯ ಬಪ್ಪಿ ಮಹಾಂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT