ಬಾಗಲಕೋಟೆ: ಆಲಮಟ್ಟಿ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಮುಳುಗಡೆ ವ್ಯಾಪ್ತಿಗೆ ಒಳಪಡದ ಹೊಲ-ತೋಟಗಳಿಗೂ ಹಿನ್ನೀರು ವ್ಯಾಪಿಸಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಜಲಾಶಯ ವ್ಯಾಪ್ತಿಯ ಬಾಗಲಕೋಟೆ, ಬೀಳಗಿ ಮತ್ತು ಮುಧೋಳ ತಾಲ್ಲೂಕಿನಲ್ಲಿ ಕಬ್ಬು, ದ್ರಾಕ್ಷಿ ತೋಟಗಳನ್ನು ಹಿನ್ನೀರು ಆವರಿಸಿದೆ. ಪಂಪ್ಸೆಟ್ಗಳು ನೀರಿನಲ್ಲಿ ಮುಳುಗಿವೆ.