ವಿಧಾನ ಮಂಡಲದ ಕಲಾಪಗಳು ನಡೆದ ದಾಟಿ ನೋಡಿದರೆ, ನಮಗೆ ಇಂತಹ ಪ್ರಜಾಪ್ರಭುತ್ವದ ಅವಶ್ಯಕತೆಯಿತ್ತೇ ಎಂಬ ಗಂಭೀರ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. ವಿಶ್ವಾಸ ಮತಯಯಾಚನೆ ಸಂದರ್ಭದಲ್ಲಿ ಸದನದೊಳಗೆ ನಡೆದ ಗಲಾಟೆ ಈ ರಾಜ್ಯವು ಕಾಪಾಡಿಕೊಂಡಿದ್ದ ಉತ್ತಮ ಸಂಸದೀಯ ಸಂಸ್ಕೃತಿಗೆ ಮಸಿ ಬಳಿದಂತಿದೆ. ಸದನದೊಳಗೆ ಅದರ ಘನತೆ ಎತ್ತಿಯಿಡಿಯುವುದು ಆಡಳಿತ ಮತ್ತು ಪ್ರತಿಪಕ್ಷಗಳೆರಡರ ಆದ್ಯ ಕರ್ತವ್ಯ.