ಹುಣಶ್ಯಾಳ ಪಿ.ಸಿ. ಗ್ರಾಮದಲ್ಲಿ ನಿರ್ಮಿಸಲಾದ 350 ಮನೆಗಳ ಆಸರೆ ಮನೆಗಳ ಹಸ್ತಾಂತರ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಈ ಗ್ರಾಮವನ್ನು ಸೇರಿಸಲಾಗಿದೆ. ಬೋರವೆಲ್ ಮುಖಾಂತರ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಾಕಿ ಉಳಿದಿರುವ 6 ಎಕರೆ ಪ್ರದೇಶವನ್ನು ಸ್ಮಶಾನಕ್ಕೆ ಬಳಸಲು ಅವಕಾಶವಿದೆ ಎಂದು ತಿಳಿಸಿದರು.
ಪ್ರವಾಹಕ್ಕೆ ಒಳಗಾಗಿರುವ ಮತಕ್ಷೇತ್ರದ ಹುಣಶ್ಯಾಳ ಪಿ.ಸಿ, ರೋಣಿಹಾಳ, ಡೋಣೂರ, ಚಿಕ್ಕಗರಸಂಗಿ ಗ್ರಾಮಗಳನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಆಸರೆ ಮನೆಗಳ ನಿರ್ಮಾಣ ಮಾಡಲಾಗಿದೆ. ಈಗಾಗಲೇ ರೋಣಿಹಾಳ ಗ್ರಾಮದಲ್ಲಿ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ ಎಂದರು.
ಚಿಕ್ಕಗರಸಂಗಿಯಲ್ಲಿ 101 ಮನೆಗಳ ನಿರ್ಮಾಣದಲ್ಲಿ ಇನ್ನೂ ಸ್ವಲ್ಪ ಕಾಮಗಾರಿ ಉಳಿದಿದೆ. ಅದು ಮುಕ್ತಾಯವಾದ ತಕ್ಷಣವೇ ಆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಮಹಾದೇವ ಮುರಗಿ, ತಾ.ಪಂ. ಅಧಿಕಾರಿ ವಿ.ಎಂ. ಕೋನರೆಡ್ಡಿ, ಜಿ.ಎಸ್.ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಬಿರಾದಾರ, ಎಸ್.ಎಸ್. ತುಮರಮಟ್ಟಿ, ಮುಖಂಡರಾದ ರಾಮು ಲೇಸಪ್ಪಗೋಳ, ಚನ್ನಗೊಂಡಪ್ಪಗೌಡ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಪದ್ಮಾವತಿ ಗುಡಿ ಮತ್ತಿತರರು ಉಪಸ್ಥಿತರಿದ್ದರು.