ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ವೆಚ್ಚದ ವಿವರ ನೀಡದೆ ಅನರ್ಹಗೊಂಡವರು ಮಾತ್ರ ಆರು ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡವರ ಪಟ್ಟಿಯನ್ನು ಪತ್ರಿಕೆಗಳಲ್ಲಿ ಜಾಹೀರು ಮಾಡಲಿ. ಅನರ್ಹತೆಯ ಪರಿಣಾಮ ಮೇಲ್ಕಂಡ ಎರಡೂ ಚುನಾವಣೆಗಳಿಗೆ ‘ಆರು ವರ್ಷ’ ಇರಲಿ. ಪಂಚಾಯತ್ ಕಾಯ್ದೆಗೆ ತಿದ್ದುಪಡಿ ಬರಲಿ. ಈ ಬಗ್ಗೆ ಕೇಂದ್ರ ಕಾನೂನು ಇಲಾಖೆ ಹಾಗೂ ಕಾನೂನು ಪಂಡಿತರು ಒಂದೆಡೆ ಕೂತು ಚರ್ಚಿಸಿ ಏಕರೂಪದ ತೀರ್ಮಾನಕ್ಕೆ ಬರುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ತಕ್ಷಣ ಮಾಡಬೇಕಾದ ಜನಪರ ಕೆಲಸ ಇದಾಗಿದೆ. ಸರ್ಕಾರ ಕಾನೂನು ಮಾಡುತ್ತದೆ ನ್ಯಾಯಾಂಗ ವಿಮರ್ಶೆ ಮಾಡುತ್ತದೆ, ಅಲ್ಲವೇ?