ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ `ಆಹಾರ ಭದ್ರತಾ ಮಸೂದೆಯ ಕರಡು~ ಅವೈಜ್ಞಾನಿಕವಾಗಿದೆ ಎಂದು ಆಹಾರದ ಹಕ್ಕಿಗಾಗಿ ಆಂದೋಲನ ಸಂಘಟನೆಯು ಖಂಡಿಸಿದೆ.
ಮಸೂದೆ ಜಾರಿ ವಿರೋಧಿಸಿ ಇದೇ 23 ರಂದು ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ರಾಜ್ಯ ಘಟಕದ ಸಂಚಾಲಕಿ ಕೆ.ಸುಧಾ ತಿಳಿಸಿದ್ದಾರೆ.