ಪ್ರಣವ್ ಚಿಂತೆ...
ಇದೇ ಸಭೆಯಲ್ಲಿ ಮಾತನಾಡಿದ ಪ್ರಣವ್ ಮುಖರ್ಜಿ,ಆಹಾರ ಮಸೂದೆ ಅನುಷ್ಠಾನಗೊಳಿಸುವ ದೈತ್ಯ ಜವಾಬ್ದಾರಿಯನ್ನು ಸರ್ಕಾರ ಹೊತ್ತಿದೆ. ಹಣಕಾಸು ಸಚಿವನಾಗಿ ಸರ್ಕಾರ ಭರಿಸಬೇಕಿರುವ ಅಗಾಧ ಸಬ್ಸಿಡಿ ವೆಚ್ಚದ ಬಗ್ಗೆ ಯೋಚಿಸಿದಾಗಲೆಲ್ಲ ನನ್ನ ನಿದ್ದೆ ಹಾರಿಹೋಗುತ್ತದೆ ಎಂದರು.
ದೇಶದ ಶೇ 63.5ರಷ್ಟು ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಒದಗಿಸುವ ಈ ಕಾಯ್ದೆಯಿಂದ ದೇಶದ ಬೊಕ್ಕಸಕ್ಕೆ ರೂ. 2.34 ಲಕ್ಷ ಕೋಟಿ ಹೊರೆಯಾಗುವ ನಿರೀಕ್ಷೆಯಿದೆ ಎಂದರು.