ಅವರು ಬಚ್ಚಿಟ್ಟುಕೊಂಡಿದ್ದು ಏಕೆ?
ಅವರು ಯಹೂದಿಗಳಾಗಿದ್ದರು. ನಾಜಿಗಳು ಯಹೂದಿಗಳನ್ನು ಹಿಡಿದು ಸೇನೆಗೆ ಸೇರಿಸುತ್ತಿದ್ದರು. ಆ್ಯನೆ ಕುಟುಂಬದವರು ಹಾಗೂ ಸ್ನೇಹಿತರಿಗೆ ಸೇನೆ ಸೇರುವುದು ಬೇಕಿರಲಿಲ್ಲ. ಅದಕ್ಕೇ ಅವರು ತಲೆಮರೆಸಿಕೊಂಡಿದ್ದರು.
ಅವರು ಎಲ್ಲಿ ಅವಿತಿದ್ದರು?
ಆಮ್ಸ್ಟರ್ಡ್ಯಾಮ್ನಲ್ಲಿ ಆ್ಯನೆ ತಂದೆಯ ಸಾಂಬಾರ ಪದಾರ್ಥಗಳ ಕಾರ್ಖಾನೆ ಇತ್ತು. ಅದರ ಅಟ್ಟದ ಮೇಲೆ ಎಲ್ಲರೂ ಅವಿತಿದ್ದರು. ಆಗ ತನಗಾದ ಅನುಭವಗಳನ್ನು ಆ್ಯನೆ ಡೈರಿಯಲ್ಲಿ ಬರೆದಿಡುತ್ತಿದ್ದಳು. ಒಂದು ಪುಟದಲ್ಲಿ ಅವಳು, `ಎಲ್ಲ ನೋವುಗಳ ನಡುವೆಯೂ ಜನ ಹೃದಯದಿಂದ ಒಳ್ಳೆಯವರೇ ಎಂದು ಈಗಲೂ ನಂಬಿದ್ದೇನೆ' ಎಂದು ಬರೆದಿದ್ದಳು.