ಇಂದು (ಡಿ.20) ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಾರಂಭ. ಒಂದು ವಾರ ದೇಶ ಹಾಗೂ ವಿವಿಧ ದೇಶಗಳ ಭಿನ್ನ ಸಂವೇದನೆಯ ಚಿತ್ರಗಳನ್ನು ನೋಡುವ ಸುವರ್ಣಾವಕಾಶ. ಡಿಸೆಂಬರ್ 27ರವರೆಗೆ ನಡೆಯುವ ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಕೆ.ಆರ್.ಸರ್ಕಲ್ ಇಲ್ಲಿ ನಡೆಯಲಿದೆ.
ಉದ್ಘಾಟನೆ: ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅತಿಥಿಗಳು: ಸಂಸದ ಪಿ.ಸಿ.ಮೋಹನ್, ಶಾಸಕ ದಿನೇಶ್ ಗುಂಡೂರಾವ್, ಮೇಯರ್ ಡಿ.ವೆಂಕಟೇಶ ಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಬಿ.ವಿಜಯ್ಕುಮಾರ್, ಫಿಲಂ ಫೆಡರೇಷನ್ ಆಫ್ ಇಂಡಿಯಾ ಉಪಾಧ್ಯಕ್ಷ ಎ.ಆರ್.ರಾಜು, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್. ಗೌರವಾನ್ವಿತ ಅತಿಥಿಗಳು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ವಿ.ಕೆ.ಮೂರ್ತಿ, ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್, ನಟ ವಿ.ರವಿಚಂದ್ರನ್, ಖ್ಯಾತ ಜಪಾನಿ ನಿರ್ದೇಶಕ ಮಾಸಾಹಿರೋ ಕೊಬಯಾಷಿ. ಸಂಜೆ 5.30. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆಯ ಅಂಗವಾಗಿ ನೆದರ್ಲ್ಯಾಂಡ್ನ `ಕೌಬಾಯ್' ಚಿತ್ರ ಪ್ರದರ್ಶನಗೊಳ್ಳಲಿದೆ.