ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನಾಳೆ ಆದದ್ದೆಲ್ಲಾ ಒಳಿತೇ...?

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಕ್ರಿಯೇಟಿವ್ ಥಿಯೇಟರ್‌ನ ಜನಪ್ರಿಯ ಹಾಸ್ಯ ನಾಟಕ `ಆದದ್ದೆಲ್ಲಾ ಒಳಿತೇ..? ಗುರುವಾರ ಮತ್ತು ಶುಕ್ರವಾರ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

ಕನ್ನಡದ ಹೆಸರಾಂತ ಹಾಸ್ಯ ಲೇಖಕಿ ಟಿ.ಸುನಂದಮ್ಮನವರ ಬರಹದಿಂದ ಪ್ರೇರಣೆಗೊಂಡ ಈ ನಾಟಕವನ್ನು ಸಂಭಾಷಣೆ, ನಟ ಸುಂದರ್ ಅವರು ರಚಿಸಿದ್ದಾರೆ.

ಡಾ. ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ಗೀತೆಗಳಿಗೆ ಗಜಾನನ ಟಿ. ನಾಯಕ್ ಸಂಗೀತ ನೀಡಿದ್ದು ಎಂ.ಡಿ.ಪಲ್ಲವಿ ಮತ್ತು ತಂಡದವರು ಹಾಡಿದ್ದಾರೆ. ನಿರ್ದೇಶಕ ಪ್ರಮೊದ್ ಶಿಗ್ಗಾಂವ್ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕದ ಬೆಳಕು ವಿನ್ಯಾಸ ಮುದ್ದಣ್ಣ ರಟ್ಟೆಹಳ್ಳಿ ಅವರದ್ದು. ಪ್ರಸಾಧನ ಕಲಾವಿದ ರಾಮಕೃಷ್ಣ ಕನ್ನರಪಾಡಿ ಅವರೂ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
ಸುಂದರ್, ಲಕ್ಷ್ಮೀ ಚಂದ್ರಶೇಖರ್, ವಿದ್ಯಾ ವೆಂಕಟರಾಮ್ ಹಾಗೂ ಶಿಲ್ಪಾ ರುದ್ರಪ್ಪ ಅಭಿನಯಿಸಿರುವ ಈ ನಾಟಕ ಈಗಾಗಲೇ 47 ಪ್ರದರ್ಶನಗಳನ್ನು ಕಂಡಿದೆ.
ನಿತ್ಯ ಸಂಜೆ 7.30ಕ್ಕೆ ಪ್ರದರ್ಶನವಾಗಲಿದೆ. ಟಿಕೆಟ್ ದರ ರೂ.100. ಮುಂಗಡ ಬುಕಿಂಗ್ ಮತ್ತು ಮಾಹಿತಿಗೆ: 96206 04479.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT