ನವದೆಹಲಿ: ಕಮಿಷನ್ ಹೆಚ್ಚಿಸಲು ಒತ್ತಾಯಿಸಿ ಅ.15ರಂದು (ಸೋಮವಾರ) ಪೆಟ್ರೋಲ್ ಬಂಕ್ಗಳನ್ನು ನಿಯಮಿತ ಅವಧಿಯಲ್ಲಿ ಮಾತ್ರ ತೆರೆಯಲು (ಸಂಜೆ 6ರವರೆಗೆ ಮಾತ್ರ) `ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟ~ ನೀಡಿರುವ ಕರೆಗೆ `ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಒಕ್ಕೂಟ~ (ಎಫ್ಎಐಪಿಟಿ) ಭಾನುವಾರ ವಿರೋಧ ವ್ಯಕ್ತಪಡಿಸಿದೆ.
ಸೋಮವಾರ ಪೆಟ್ರೋಲ್ ಬಂಕ್ಗಳು ಎಂದಿನಿಂತೆ ಕಾರ್ಯನಿರ್ವಹಿಸಲಿವೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಜಯ್ ಬನ್ಸಲ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
`ಕಮಿಷನ್ ದರ ಹೆಚ್ಚಳ ಸಂಬಂಧ ಸೋಮವಾರ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಹೀಗಾಗಿ ಪ್ರತಿಭಟನೆ ಕುರಿತ ನಿರ್ಧಾರವನ್ನು ಆ ನಂತರವಷ್ಟೇ ತೆಗೆದುಕೊಳ್ಳಲಾಗುವುದು~ ಎಂದು ಒಕ್ಕೂಟವು ಸ್ಪಷ್ಟಪಡಿಸಿದೆ.
ಅಪೂರ್ವ ಚಂದ್ರ ಸಮಿತಿಯ ಶಿಫಾರಸಿನಂತೆ ನಿರ್ವಹಣಾ ವೆಚ್ಚ ಆಧರಿಸಿ ಕಮಿಷನ್ ನೀಡಬೇಕೆಂಬುದು ವಿತರಕರ ಒತ್ತಾಯ. ಆರು ತಿಂಗಳಿಗೊಮ್ಮೆ ಕಮಿಷನ್ ದರ ಪರಿಷ್ಕರಿಸಬೇಕೆಂಬುದೂ ಸಮಿತಿಯ ಶಿಫಾರಸುಗಳಲ್ಲಿ ಸೇರಿದೆ.