ಬೆಂಗಳೂರು: ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಎನ್ಐಐಟಿ ಕಾರ್ಪೋರೇಟ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಮೊದಲ 20 ಸ್ಥಾನ ಗಳಿಸಿದ ಉದ್ಯಮಿ ಗಳೊಂದಿಗೆ ಏಕಕಾಲಕ್ಕೆ ಚೆಸ್ ಆಡಲು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಈ ಚಾಂಪಿಯನ್ಷಿಪ್ ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ‘ಪಿ’ ಹಾಲ್ನಲ್ಲಿ ಸಂಜೆ 5.30ಕ್ಕೆ ನಡೆಯ ಲಿದೆ. ಇಂಟೆಲ್, ವಿಪ್ರೋ, ಟಿಸಿಎಸ್, ಎಕ್ಸೆಂಜರ್, ಮಣಿಪಾಲ್ ಹಾಸ್ಟಿ ಟಲ್, ಸೇರಿ ದಂತೆ 50ಕ್ಕೂ ಹೆಚ್ಚು ಪ್ರಮುಖ ಕಾರ್ಪೋರೇಟ್ ಸಂಸ್ಥೆಗಳ ಉದ್ಯಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.