ಶ್ರುತ್ ಅಂಡ್ ಸ್ಮಿತ್ ಫೌಂಡೇಶನ್: ಆರ್.ವಿ.ಶಿಕ್ಷಕರ ಕಾಲೇಜು ಸಭಾಂಗಣ, ಆರ್.ವಿ.ರಸ್ತೆ, ಜಯನಗರ 2ನೇ ಬ್ಲಾಕ್. ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ‘ಅಧ್ಯಾಪನ್–2013’ ಉದ್ಘಾಟನಾ ಸಮಾರಂಭ.
ಅತಿಥಿಗಳು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಮೇಯರ್ ಬಿ.ಎಸ್. ಸತ್ಯನಾರಾಯಣ, ಶಾಸಕ ಬಿ.ಎನ್. ವಿಜಯಕುಮಾರ್. ಅಧ್ಯಕ್ಷತೆ: ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ನ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ. ಬೆಳಿಗ್ಗೆ 9.30.
ಶುಕ್ರವಾರ ಮತ್ತು ಶನಿವಾರ ಎರಡು ದಿನ ನಡೆವ ಈ ಅಂತರರಾಷ್ಟ್ರೀಯ ಶೈಕ್ಷಣಿಕ ಸಮಾವೇಶದಲ್ಲಿ ಡಿಎಸ್ಇಆರ್ಟಿ ನಿರ್ದೇಶಕ ಎಚ್.ಎಸ್.ರಾಮರಾವ್ (ಸ್ಕೂಲ್ ಆಸ್ ಎ ಸೆಂಟರ್ ಆಫ್ ಎಕ್ಸಲೆನ್ಸ್), ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಡೆಸ್ ಹೆವಿಟ್ (ಇನ್ಕ್ಲುಸಿವ್ ಎಜುಕೇಷನ್), ಡಾ. ಎಂ.ಎನ್.ರವಿಶಂಕರ್, ಸುನೀತಾ ಫಡ್ನಿಸ್, ಡಾ. ಗುರುರಾಜ ಕರ್ಜಗಿ ಅವರಿಂದ ಉಪನ್ಯಾಸವಿರುತ್ತದೆ. ಪ್ರವೇಶ ಉಚಿತ. ನೋಂದಣಿ ಮತ್ತು ಮಾಹಿತಿಗೆ: 080 2642 6172, 2642 6123, 98863 23754.