ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವೇಷದ ಹುಲಿ ಪ್ರದರ್ಶನ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೃಷ್ಣಾಪುರದೊಡ್ಡಿ: ಮಂಗಳವಾರ `ವೇಷದ ಹುಲಿ~ ನಾಟಕ (ರಚನೆ: ಡಾ.ಎಂ.ಭೈರೇಗೌಡ. ಸಂಗೀತ, ವಿನ್ಯಾಸ, ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ್).

ಹಳ್ಳಿಕಾರ ಜನಾಂಗೀಯ ಅಧ್ಯಯನಕ್ಕೆ ಗುಬ್ಬಿ ತಾಲ್ಲೂಕಿನ ಜನ್ನೇನಹಳ್ಳಿಯಲ್ಲಿ ಕ್ಷೇತ್ರಕಾರ್ಯ ಮಾಡುವಾಗ ಸಿಕ್ಕ ಕಥೆಯ ಜಾಡು ಹಿಡಿದು ರಚಿತವಾದ ನಾಟಕ

`ವೇಷದ ಹುಲಿ~. 11ನೇ ವಯಸ್ಸಿಗೆ ವಿಧವೆಯಾದ ಚಿಕ್ಕಮಣಮ್ಮ ಹೇಳಿದ ಕಥೆ ಮತ್ತು ಹುಲಿಕಲ್ಲು ಶಾಸನಗಳು ಇದರ ರಚನೆಗೆ ಆಕರಗಳು. ಇದು ಕ್ರಿ.ಶ. ಹದಿನೈದನೇ ಶತಮಾನದಲ್ಲಿ ನಡೆದಿರಬಹುದಾದ ಘಟನೆ.

ಪ್ರಭುತ್ವ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚುವಂತೆ ಜನಸಾಮಾನ್ಯರ ಮದುವೆಯ ವಿಚಾರದಲ್ಲೂ ತಲೆ ಹಾಕಿ, ನಡೆವ ಮದುವೆಗಳನ್ನು ನಿಲ್ಲಿಸಿ ವಧುವನ್ನು ತನ್ನ ವಶಪಡಿಸಿಕೊಳ್ಳುವ  ಹುನ್ನಾರದ ಕಥೆಯಿದು. ವರನ ಕಡೆಯವರು ಬೇಡಿಕೆಗಳನ್ನು ಈಡೇರಿಸುವ ಶಕ್ತಿಯಿದ್ದರೂ ಅಕ್ಕಸಾಲಿಯನ್ನೇ ಅಪರಹರಣ ಮಾಡಿಸುವ ಕೆಲಸವನ್ನು ಈ ಪ್ರಭುತ್ವ ಮಾಡಿಸುತ್ತದೆ.

ಇದು ಅಂದಿನ ಸಮಾಜದಲ್ಲಿ ತಲ್ಲಣ ಉಂಟುಮಾಡುತ್ತದೆ. ಅದರಲ್ಲಿ ಮನುಷ್ಯ ಮೃಗವಾಗಿ ಮತ್ತೆ ಮೃಗವೇ ಮನುಷ್ಯನಾಗುವ ಪರಿವರ್ತನೆಯ ಕಥೆಯಿದೆ. ಹೀಗಾಗಿ ವರ್ತಮಾನದ ಎಲ್ಲ ತಲ್ಲಣಗಳನ್ನು ಅನಾವರಣಗೊಳಿಸುತ್ತದೆ.

ಸ್ಥಳ: ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ. ಸಂಜೆ 6.30
   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT