ಹರಿದ್ವಾರ, (ಪಿಟಿಐ): ~ನಾನೇನೋ ಪ್ರಧಾನಿ ಅವರನ್ನು ಕ್ಷಮಿಸಿಬಿಡಬಹುದು, ಆದರೆ, ಇತಿಹಾಸ ಅವರನ್ನು ಕ್ಷಮಿಸದು ಎಂದು ಹೇಳಿರುವ ಯೋಗ ಗುರು ರಾಮ್ ದೇವ್ ಅವರು, ಬಲವಂತದಿಂದ ತಮ್ಮ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಅವರು ಎಸಗಿದ ~ರಾಜಕೀಯ ಪಾಪ~ ಎಂದು ಆಪಾದಿಸಿದ್ದಾರೆ.
ಭಾನುವಾರ ರಾತ್ರಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿನ ~ಸತ್ಯಾಗ್ರಹಿಗಳ ಮೇಲೆ ನಡೆಸಿದ ಪೊಲೀಸ್ ದೌರ್ಜನ್ಯವನ್ನು ದುರದೃಷ್ಟಕರ ಎಂದು ಹೇಳಿದ ಪ್ರಧಾನಿ ಅವರು, ತಮ್ಮ ಪಾಪದ ನಡೆಯನ್ನು ತಾವೇ ಒಪ್ಪಿಕೊಂಡಂತಾಗಿದೆ. ಪ್ರಧಾನಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ನಾನು ಅವರು ಎಸಗಿದ ತಪ್ಪನ್ನು ಮನ್ನಿಸಿದ್ದೇನೆ~ ಎಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.
ಹರಿದ್ವಾರದಲ್ಲಿ ತಮ್ಮ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನು ಮುಂದುವರೆಸಿರುವ ಅವರು, ಮಂಗಳವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪ್ರಧಾನಿ ಅವರು ತಮ್ಮ ನಡೆಯಿಂದ ಪ್ರಜಾಪ್ರಭುತ್ವಕ್ಕೆ ಮಸಿ ಬಳೆದಿದ್ದಾರೆ. ಹೀಗಾಗಿ ಪ್ರಧಾನಿ ಅವರ ~ರಾಜಕೀಯ ಪಾಪ~ದ ನಡೆಯನ್ನು ಭಾರತದ ಚರಿತ್ರೆಯಲ್ಲಿ ಅಷ್ಟೇ ಅಲ್ಲ ಜಗತ್ತಿನ ಚರಿತ್ರೆಯಲ್ಲಿಯೂ ಅವರಿಗೆ ಕ್ಷಮೆ ಎಂಬುದಿರುವುದಿಲ್ಲ ಎಂದಿದ್ದಾರೆ.