ಎಂಜಿನಿಯರ್ಗಳಾಗಿ, ಅಧ್ಯಾಪಕರಾಗಿ, ವೈದ್ಯರಾಗಿ, ಬ್ಯಾಂಕ್ ಉದ್ಯೋಗಿಗಳಾಗಿ, ಗುತ್ತಿಗೆದಾರರಾಗಿ, ಸರ್ಕಾರಿ ಮಟ್ಟದ ಅಧಿಕಾರಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಪಾರಂಪರಿಕ ವಾಸ್ತು ಶೈಲಿ ಹೊಂದಿದ್ದ ಈ ಶಾಲೆಯ ತರಗತಿಗಳನ್ನು ಬೇರ್ಪಡಿಸಲು ಗೋಡೆಯನ್ನು ಅಡ್ಡವಾಗಿ ನಿರ್ಮಿಸದೇ ಇದ್ದುದರಿಂದ ಸಭಾಂಗಣವಾಗಿ ವಿವಿಧ ಕಾರ್ಯಕ್ರಮಕ್ಕೂ ಉಪಯೋಗವಾಗುತ್ತಿತ್ತು.
ಆರಂಭದಲ್ಲಿ ಐದನೇ ತರಗತಿಯವರೆಗೆ ಇದ್ದ ಈ ಶಾಲೆ ಕ್ರಮೇಣ ಹಂತಹಂತವಾಗಿ ಏಳನೇ ತರಗತಿಯವರೆಗೆ ವಿಸ್ತರಣೆಗೊಂಡಿತು. ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ಬಳಿಕ ಖಾಲಿ ಬಿದ್ದಿದ್ದ ಕಟ್ಟಡ ಎಂಆರ್ಪಿಎಲ್ ಗುತ್ತಿಗೆ ಕಾರ್ಮಿಕರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿತ್ತು. ಕೆಲ ದಿನಗಳವರೆಗೆ ಸಂಗೀತ ಶಿಕ್ಷಣವನ್ನೂ ಶಾಲೆಯ ಕೊಠಡಿಯಲ್ಲಿ ನೀಡಲಾಗುತ್ತಿತ್ತು.
ಅಧ್ಯಾಪಕನ ಸ್ಮರಣೆ: ಈ ಶಾಲೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಅಧ್ಯಾಪಕರಲ್ಲಿ ಒಬ್ಬರು ಬಾಲಕೃಷ್ಣ ರಾವ್. ಇತ್ತೀಚೆಗಷ್ಟೇ ಅವರು ನಿಧನರಾಗಿದ್ದರು. ಈಗ ಶಾಲಾ ಕಟ್ಟಡವೂ ನೆಲಸಮವಾಗಿದೆ. ಶಾರದಾ ಮಾತೆಯ ಆರಾಧನೆಗೂ ಕಾರಣಕರ್ತರಾಗಿದ್ದ ಅವರು ಹಲವು ಶಿಷ್ಯಂದಿರ ಭವಿಷ್ಯ ರೂಪಿಸಿದ ರೂವಾರಿಯೂ ಆಗಿದ್ದಾರೆ.