ನ್ಯಾಯ ನಿರ್ಣಯ ತುಂಬ ತಡವಾದರೆ ನ್ಯಾಯ ನಿರಾಕರಿಸಿದಂತೆ ಎಂದು ತಿಳಿಯಲಾಗುತ್ತದೆ. ನ್ಯಾಯಾಲಯದ ತೀರ್ಪು ತಡವಾಗಲು ಸರ್ಕಾರ, ವಕೀಲರು ಹಾಗೂ ಕಕ್ಷಿದಾರರು ಕಾರಣ ಎಂದು ಹೇಳಲಾಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನ್ಯಾಯಾಂಗ ಸ್ವತಂತ್ರವಾದ ಪ್ರಮುಖ ಅಂಗವಾಗಿದೆ. ಪ್ರಜೆಗಳಿಗೆ ನ್ಯಾಯ ಶೀಘ್ರವಾಗಿ ಹಾಗೂ ಅವರ ಆರ್ಥಿಕ ಮಿತಿಯೊಳಗೆ, ದುಬಾರಿಯಾಗದೆ ದೊರೆಯಬೇಕು.
ಸಮಾವೇಶದಲ್ಲಿ ಪಾಲ್ಗೊಂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜ್ಯದಲ್ಲಿ ಸ್ಥಾಪಿಸಲಾದ 166 ತ್ವರಿತ ನ್ಯಾಯಾಲಯಗಳು ನಾಲ್ಕು ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿವೆ ಎಂದು ತಿಳಿಸಿದರು. ಎಲ್ಲ ರಾಜ್ಯಗಳಲ್ಲಿ ತ್ವರಿತ ನ್ಯಾಯಾಲಯಗಳು ಸ್ಥಾಪನೆಯಾಗಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕು. ಪ್ರಕರಣಗಳು ಬೇಗ ಇತ್ಯರ್ಥಗೊಳ್ಳಬೇಕು.
- ಸದಾನಂದ ಹೆಗಡೆಕಟ್ಟೆ
ಮೂಡುಬಿದಿರೆ