ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ 8,9 ರಂದು ಮರಗಳ ಉತ್ಸವ

Last Updated 4 ಜನವರಿ 2014, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಾಕೃತಿಕ  ಸೊಬ­ಗನ್ನು ಹಿಡಿದಿಟ್ಟಿರುವ ವೃಕ್ಷಗಳ ಕುರಿತ ‘ನೆರಳು’–ಬೆಂಗಳೂರು ಮರ­ಗಳ ಉತ್ಸವವನ್ನು ಫೆಬ್ರುವರಿ 8 ಹಾಗೂ 9 ರಂದು ಕಬ್ಬನ್‌ ಉದ್ಯಾನ­ದಲ್ಲಿ ಆಯೋಜಿಸಲಾಗಿದೆ.

ವೃಕ್ಷಗಳಿಂದಾಗಿಯೇ ನಗರಕ್ಕೆ ಪಾರಂ­ಪರಿಕ ಮೆರುಗು ದೊರಕಿದೆ. ಜಾಗತೀ­ಕ­ರಣದ ಹಿನ್ನೆಲೆಯಲ್ಲಿ  ಸಾಗುತ್ತಿ­ರುವ ಅಭಿವೃದ್ಧಿಯ ಭರಾಟೆಯಲ್ಲಿ ಮರಗಳ ಮಾರಣಹೋಮ ನಡೆ­ಯು­ತ್ತಿದೆ. ಈ  ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವೃಕ್ಷಗಳ ಕುರಿತು ಎರಡು ದಿನಗಳ ಅಭಿಯಾನಕ್ಕೆ ಕಬ್ಬನ್ ಉದ್ಯಾನ ವೇದಿಕೆಯಾಗಲಿದೆ.

ಸಾರ್ವಜನಿಕ ಉದ್ಯಾನಗಳು ಹಾಗೂ ಅವುಗಳ ಸಂರಕ್ಷಣೆ, ಸ್ಥಳೀಯ, ಜಾಗತಿಕ ಮಟ್ಟದಲ್ಲಿ ಮರ­ಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಜೈವಿಕ ವೈವಿಧ್ಯ ಕುರಿತ ಕತೆ ನಿರೂಪಣೆ, ಮರಗಳ ಅಪ್ಪಿಕೊ ಅಭಿಯಾನ ನಡೆಯಲಿದ್ದು, ಪರಿಸರ ಪ್ರೇಮಿಗಳು, ತಜ್ಞರು, ತಂತ್ರಜ್ಞರು, ಇತಿಹಾ­ಸಜ್ಞರು ಕೈಜೋಡಿಸಲಿದ್ದಾರೆ. ಕಾರ್ಯಕ್ರಮವು ಕ್ರೌಡ್‌ ಫಂಡಿಂಗ್ (ಜನಧನ) ಮೂಲಕ ಆಯೋಜನೆ­ಗೊಳ್ಳುತ್ತಿದ್ದು, ಆಸಕ್ತರು ಕೆಳಕಂಡ ವೆಬ್‌ಸೈಟ್‌ ಸಂಪರ್ಕಿಸ­ಬ­ಹುದು. www.neralu.in/donate/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT