ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ ಬಾಕ್ಸ್

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

`ಮೈಂಡ್ ಯುವರ್ ಲಾಂಗ್ವೇಜ್~ ಬರೆಹದ ವ್ಯಂಗ್ಯ ಅರ್ಥವಾಗುವಂಥದ್ದೇ. ಆದರೆ ಇಲ್ಲೊಂದು ಸಮಸ್ಯೆಯಿದೆ. ಇದು ಇಂಗ್ಲಿಷ್ ಕಲಿಯದೇ ಇರುವುದಕ್ಕೆ ಅಥವಾ ಇಂಗ್ಲಿಷನ್ನು ಸರಿಯಾಗಿ ಬಳಸದೇ ಇರುವುದಕ್ಕೆ ಒಂದು ಸಮರ್ಥನೆಯಂಥಾದರೆ ಅಪಾಯವಿದೆ. ಯಾರು ಏನೇ ಹೇಳಿದರೂ ಇಂಗ್ಲಿಷ್ ಈಗ ವಿಶ್ವಭಾಷೆಯಾಗಿಬಿಟ್ಟಿದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ.
- ಕೆ.ಪಿ. ಚಂದ್ರಶೇಖರ, ಮೈಸೂರು

`ಮೈಂಡ್ ಯುವರ್ ಲಾಂಗ್ವೇಜ್~ ಇಷ್ಟವಾಯಿತು. ಕನ್ನಡದಲ್ಲಿ ಈ ಬಗೆಯ ಬರೆಹಗಳು ಬರುವುದೇ ಇಲ್ಲ. ಕಾಮನಬಿಲ್ಲು ಆ ಕೊರತೆಯನ್ನು ತುಂಬಿಕೊಟ್ಟಿದೆ. ಇಂಥ ಇನ್ನಷ್ಟು ಲೇಖನಗಳು `ಕಾಮನಬಿಲ್ಲು~ ಪುರವಣಿ ನೀಡಲಿ.
- ಕೆ. ಎಸ್. ರಾಜೇಶ್, ಮೈಸೂರು

ಲಕ್ಷ್ಮೀ ಮನಮೋಹನ್ ಅವರ ಕಥೆ ಹೊಸ ಗಾಯಕಿಯರಿಗೆ ಸ್ಫೂರ್ತಿದಾಯಕವಾಗಿದೆ. ತಮಗೆ ದೊರೆತ ಅವಕಾಶಗಳಿಗಾಗಿ ಅವರು ಅಹಂಕಾರ ಪಡದೆ ಉಳಿದವರಿಗೆ ದಾರಿ ದೀಪವಾಗುವಂತೆ ತಮ್ಮ ಸಾಧನೆಯ ಹಾದಿಯನ್ನು ವಿವರಿಸಿದ್ದಾರೆ. ಅವರ ಕಲಾ ಬದುಕು ಯಶಸ್ವಿಯಾಗಲಿ.
- ಡಾ.ಕೆ.ವಿ. ಸಂತೋಷ್ ಹೊಳಲ್ಕೆರೆ, ಚಿತ್ರದುರ್ಗ

ಎಂ.ಜಿ. ಬಾಲಕೃಷ್ಣ ಅವರ ಕಂಬಳ ಕ್ರೀಡೆಯ ಕುರಿತ ಲೇಖನ ಮಾಹಿತಿ ಪೂರ್ಣವಾಗಿತ್ತು. ಜೊತೆಗೆ ಕಂಬಳ ವೀರರ ನೋವಿನ ಕತೆಯನ್ನೂ ಅದು ಹೇಳಿತು. ಇಂಥ ಮಾಹಿತಿ ಪೂರ್ಣ ಲೇಖನಗಳನ್ನು ಇನ್ನಷ್ಟು ಪ್ರಕಟಿಸುವಂತೆ ನಾನು ಕೋರುತ್ತಿದ್ದೇನೆ. 
- ಎಚ್. ಆನಂದ್ ಕುಮಾರ್, ಚಿತ್ರದುರ್ಗ

ಹೊಸ ವರ್ಷಕ್ಕೆ ಹೊಸ ಪುರವಣಿಯನ್ನು ಕೊಟ್ಟಿರುವ ಪ್ರಜಾವಾಣಿಗೆ ಧನ್ಯವಾದಗಳು. ಕಂಬಳದ ಕುರಿತ ಲೇಖನ ತೋರಿಸಿಕೊಟ್ಟ ಸತ್ಯ ಮತ್ತೊಂದು. ಗದ್ದೆ ತೋಟಗಳಲ್ಲಿ ಮೈಮುರಿದು ದುಡಿಯುವವರು ಫಿಟ್‌ನೆಸ್ ಕಾಪಾಡಿಕೊಳ್ಳಲು ಯಾವ ಸರ್ಕಸ್ ಕೂಡ ಮಾಡಬೇಕಾಗಿಲ್ಲ ಎಂಬ ಸತ್ಯವನ್ನು ನಾವೆಲ್ಲಾ ಅರಿತುಕೊಳ್ಳಬೇಕಾಗಿದೆ. ಹೊಸ ಕಾಲದ ವೃತ್ತಿಗಳೆಲ್ಲವೂ ನಮ್ಮ ದೇಹವನ್ನು ಸೋಮಾರಿಯಾಗಿಸುತ್ತಿವೆ.
- ಬಾರಿಕೇರ ಕರಿಯಪ್ಪ, ದಾವಣಗೆರೆ

ಕಂಬಳವನ್ನು ಮುಖ್ಯವಾಹಿನಿಯ ಕ್ರೀಡೆಯಂತೆ ಪರಿಗಣಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ವಿವಿಧ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸುವಾಗಲೇ ಜಾನಪದ ಕ್ರೀಡಾ ಪ್ರತಿಭೆಗಳನ್ನು ಪರಿಗಣಿಸಬೇಕು. ಕಂಬಳದ ಕುರಿತಂತೆ ಅಪೂರ್ವ ಮಾಹಿತಿಗಳನ್ನು ನೀಡಿದ `ಕಾಮನಬಿಲ್ಲು~ ಪುರವಣಿಗೆ ಧನ್ಯವಾದಗಳು.
- ಕೆ.ಪಿ. ರಾಮಕೃಷ್ಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT