ಸ್ವಲ್ಪ ಕೆಲಸ ಮಾತ್ರ ಬಾಕಿ ಉಳಿದಿದೆ. ಒಮ್ಮೆ ದತ್ತಾಂಶ ಸಂಗ್ರಹ ಕಾರ್ಯ ಪೂರ್ಣಗೊಂಡರೆ, ನಂತರ ಭವಿಷ್ಯ ನಿಧಿ ಚಂದಾದಾರರು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ, ನಗದು ಸ್ವೀಕಾರ ಇತ್ಯಾದಿ ವಹಿವಾಟುಗಳನ್ನು ಆನ್ಲೈನ್ ಮೂಲಕವೇ ಸುಲಭವಾಗಿ ಮಾಡಬಹುದು ಎಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತ ಸಮಿರೇಂದ್ರ ಚಟರ್ಜಿ ತಿಳಿಸಿದ್ದಾರೆ.