ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಐದನೆಯವರು...

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಾಗಿದ್ದಾಗಲೇ ಕೊನೆಯುಸಿರೆಳೆದ ರಾಜ್ಯದ ನಾಲ್ವರು ಸಚಿವರ ಸಾಲಿಗೆ ಈಗ ಡಾ.ವಿ.ಎಸ್.ಆಚಾರ್ಯ ಸೇರ್ಪಡೆಯಾಗಿದ್ದಾರೆ.

ನಜೀರ್ ಸಾಬ್ 1988ರ ಅಕ್ಟೋಬರ್ 24ರಂದು ವಿಧಿವಶರಾದಾಗ ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದರು. ಎಸ್.ಬಂಗಾರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಕೆ.ಎಚ್.ಪಾಟೀಲ್ ಅವರು 1992ರ ಫೆ.9ರಂದು ನಿಧನರಾದರು. ಎಂ.ವೀರಪ್ಪ ಮೊಯಿಲಿ ಸಂಪುಟದಲ್ಲಿ ಲಾಟರಿ ಮತ್ತು ಸಣ್ಣ ಉಳಿತಾಯ ಖಾತೆ ಸಚಿವರಾಗಿದ್ದ ತಿಪಟೂರಿನ ಟಿ.ಎಂ.ಮಂಜುನಾಥ್ 1994ರ ಮೇ 21ರಂದು ಕೊನೆಯುಸಿರೆಳೆದರು.

ಮಂಡ್ಯದ ಎಸ್.ಡಿ.ಜಯರಾಂ ಅವರು 1998ರ ಜನವರಿ 27ರಂದು ನಿಧನರಾದರು. ಆಗ ಅವರು, ಜೆ.ಎಚ್.ಪಟೇಲ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದರು.

ಸಚಿವರಾಗಿದ್ದಾಗ ನಿಧನ ಹೊಂದಿದ ಈ ನಾಲ್ಕು ಮಂದಿಯ ಸಾಲಿಗೆ ಈಗ ಆಚಾರ್ಯ ಸೇರಿದ್ದಾರೆ. ಸದಾನಂದ ಗೌಡರ ಸಂಪುಟದಲ್ಲಿ ಆಚಾರ್ಯ ಅವರು ಉನ್ನತ ಶಿಕ್ಷಣ, ಯೋಜನೆ, ಮುಜರಾಯಿ ಮತ್ತು ಐಟಿ-ಬಿಟಿ ಸಚಿವರಾಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT