ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟ ಚಿತ್ರದ ಪ್ರಚಾರಕ್ಕೆ ಮೈಸೂರಲ್ಲಿ ಚಾಲನೆ

Last Updated 8 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಮೈಸೂರು: ಉತ್ತರ ಭಾರತದ ಕುಟುಂಬವೊಂದರ ಕನ್ನಡಪ್ರೇಮದ ಫಲವಾಗಿ ಬೆಳ್ಳಿತೆರೆಗೆ ಬರುತ್ತಿರುವ `ಇಷ್ಟ~ ಚಿತ್ರದ ಪ್ರಚಾರದ ಬಂಡಿಗೆ ಬುಧವಾರ ಮೈಸೂರಿನಲ್ಲಿ ಚಾಲನೆ ಸಿಕ್ಕಿತು.

ಆರ್‌ಎಂವಿ ಕಂಬೈನ್ಸ್‌ನ ಲಾಂಛನ ದಲ್ಲಿ ಈ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ವಿಜಯಕುಮಾರ ಛಾಬ್ರಿಯಾ ನಿರ್ಮಾಪಕರಾದರೆ, ಅವರ ಪತ್ನಿ ಇಂದ್ರಾಣಿ ಸಂಗೀತ ನಿರ್ದೇಶಕಿ ಮತ್ತು ಮಗಳು ಭೂಮಿಕಾ ಛಾಬ್ರಿಯಾ ನಾಯಕಿಯಾಗಿದ್ದಾರೆ.

ನಗರದ ತುಂಬಾ ಪ್ರಚಾರ ಮಾಡಲಿರುವ ವಾಹನ `ಇಷ್ಟ ಬಂಡಿ~ಗೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.

`ಸೆಪ್ಟೆಂಬರ್ 30ರಂದು ನವ ರಾತ್ರಿಯ ಸಂದರ್ಭದಲ್ಲಿಯೇ ಈ ಚಿತ್ರ ಬಿಡುಗಡೆಯಾಗಲಿದೆ. ಡಾ. ರಾಜಕುಮಾರ್ ಅವರ ಅಪ್ಪಟ ಅಭಿ ಮಾನಿಯಾಗಿರುವ ವಿಜಯಕುಮಾರ ಛಾಬ್ರಿಯಾ ಅವರು ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿಯೇ ಇದ್ದಾರೆ. ಇದೀಗ ತಮ್ಮ ಪುತ್ರಿಯನ್ನೇ ನಾಯಕಿಯನ್ನಾಗಿಸಿ ಕನ್ನಡ ಚಿತ್ರವನ್ನು ಅರ್ಪಿಸಿದ್ದಾರೆ~ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ನಿರ್ಮಾಪಕ ಛಾಬ್ರಿಯಾ, `ವರನಟ ಡಾ. ರಾಜ್ ಅವರ ಅಭಿಮಾನಿ ನಾನು. ಅವರ ಚಿತ್ರಗಳನ್ನು ನೋಡಿಯೇ ಕನ್ನಡ ಕಲಿತಿದ್ದೇನೆ~ ಎಂದರು.

ಚಿತ್ರದ ನಾಯಕಿ ಭೂಮಿಕಾ ಮಾತನಾಡಿದರು. ನಿರ್ದೇಶಕ ಆರ್.ಪಿ. ಕೃಷ್ಣ, ಚಿತ್ರದ ನಾಯಕ ಸಂತೋಷ ಶ್ವರಭಿ ಎಂ. ಸಂಜೀವ್, ಮೈಸೂರಿನ ಅಮೋಘ ಚಾನೆಲ್ ಮಾಲೀಕರಾದ ಬಿಳಿಗಿರಿ ರಂಗನಾಥ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT