ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಪಟ್ಟು ಓದಿ: ಕಾರಾಗೃಹ ಡಿಐಜಿ

Last Updated 13 ಡಿಸೆಂಬರ್ 2013, 9:05 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪೈಪೋಟಿ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ, ಉತ್ತಮ ಅಂಕ ಪಡೆದು, ಸಮಾಜದಲ್ಲಿ ಸತ್ಪ್ರಜೆಗಳಾಗಬೇಕು ಎಂದು ಕರ್ನಾಟಕ ಕಾರಾಗೃಹಗಳ ಉಪಮಹಾನಿರೀಕ್ಷಕ (ಡಿಐಜಿ) ವಿ.ಎಸ್.ರಾಜ ತಿಳಿಸಿದರು.

ತಾಲ್ಲೂಕಿನ ಚೇಳೂರಿನಲ್ಲಿ ಗುರು­ವಾರ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿದ್ದ  ‘ಗುರುವಂದನಾ ಕಾರ್ಯಕ್ರಮ’ ಉದ್ಘಾ­ಟಿಸಿ ಮಾತನಾಡಿದ ಅವರು ಗುರುಗಳು ವಿದ್ಯಾರ್ಥಿ ಜೀವನದ ದಾರಿದೀಪ ಆಗಿ­ದ್ದಾರೆ. ಕಷ್ಟಪಟ್ಟು ವ್ಯಾಸಂಗ ಮಾಡುವು­ದಕ್ಕಿಂತ ಇಷ್ಟ ಪಟ್ಟು ವ್ಯಾಸಂಗ ಮಾಡ­ಬೇಕು ಎಂದು ಸಲಹೆ ನೀಡಿದರು.

ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎನ್.ವಿ.ವೆಂಕಟಶಿವಾರೆಡ್ಡಿ ಮಾತ­ನಾಡಿ, ಇದೀಗ ತರಗತಿಗಳಲ್ಲಿ ಪಾಠ–ಪ್ರವಚನ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಭೆ, ಮಾಹಿತಿಗಳು, ಗಣತಿಗಳಿಗೆ ಆಯೋಜನೆ, ಅಕ್ಷರ ದಾಸೋಹ, ಕ್ಷೀರಭಾಗ್ಯದಂಥ ಕೆಲಸ­ಗಳನ್ನು ಅನಿವಾರ್ಯವಾಗಿ ಮಾಡ­ಬೇಕಿದೆ. ಇದರಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಮಟ್ಟ ಕುಸಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಭಾಗ್ಯಶ್ರೀ ಅವರ ಭರತನಾಟ್ಯ ಜನ­ಮನ­ಸೂರೆಗೊಂಡಿತು. ಎ.ಅಜಿತ್ ಪ್ರಸಾದ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿ­ಯಾನದ ಜಿಲ್ಲಾ ಯೋಜನಾ ಉಪ­ಸಮನ್ವಾಧಿಕಾರಿ ಕೆ.ಮಂಜುನಾಥ್, ಕ್ಷೇತ್ರ­ಶಿಕ್ಷಣಾಧಿಕಾರಿಗಳಾದ ಕೆ.ವೆಂಕಟೇಶ್, ಕೆ.ಜಿ.ರಂಗಯ್ಯ, ಡಿವೈಎಸ್‌ಪಿ ಸಣ್ಣ­ತಿಮ್ಮಯ್ಯ, ಹಳೇ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಪಿ.ಜಯ­ರಾಮ­ರೆಡ್ಡಿ, ಮಹಮದ್ ಗೌಸ್, ಎಸ್.ಎನ್.­ಸುಧಾಕರ್, ಸಿ.ಪಿ.ಸುಬ್ಬಾರೆಡ್ಡಿ, ಪಿ.ಎಸ್.­ರಾಜಗೋಪಾಲ್, ಎಂ.ಜಯ­ರಾಮ­ರೆಡ್ಡಿ, ಡಾ.ಬಿ.ಎನ್.ನಾರಾಯಣರೆಡ್ಡಿ, ಪ್ರಸಾದ್, ತಿಪ್ಪಣ್ಣ, ಲಕ್ಷ್ಮೀನಾರಾ­ಯಣಪ್ಪ, ಅಶ್ವಥ್ಥನಾರಾಯಣರೆಡ್ಡಿ, ಷಡಾ­ಕ್ಷರಿ, ನಾರಾಯಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ಎಸ್.ರವೀಂದ್ರ­ನಾಥ್, ನಿವೃತ್ತ ಮುಖ್ಯಶಿಕ್ಷಕರಾದ ಎಸ್.ವಿ.ಕೃಷ್ಣಮೂರ್ತಿ, ಬಿ.ಎಂ.­ನಾಗ­ಭೂಷಣಾರಾಧ್ಯ, ಎನ್.ಎ.­ಸತ್ಯ­ನಾರಾ­ಯಣರಾವ್ ಅವರಿಗೆ ಚೇಳೂರು ಹಳೇ ವಿದ್ಯಾರ್ಥಿಗಳ ಒಕ್ಕೂಟದಿಂದ ಗುರು­ವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT