ನವದೆಹಲಿ (ಪಿಟಿಐ): ದೆಹಲಿ ಹೈ ಕೋರ್ಟ್ ಮೇಲೆ ನಡೆದ ಬಾಂಬ್ ದಾಳಿ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಇಸ್ರೇಲ್, ದುಷ್ಕೃತ್ಯವನ್ನು ಕಟುವಾಗಿ ಖಂಡಿಸಿದೆ. `ಸಂತಸ ಹಾಗೂ ದುಃಖ- ಎರಡೂ ಸನ್ನಿವೇಶಗಳಲ್ಲಿ ಭಾರತ ಮತ್ತು ಇಸ್ರೇಲ್ ಸಹೋದರತ್ವದಂತಹ ಸಂಬಂಧ ಹೊಂದಿವೆ.
ಅಂತಿಮವಾಗಿ ಭಾರತದ ಜನತೆ ಹಾಗೂ ಸರ್ಕಾರ ಇಂತಹ ದಾಳಿಗಳನ್ನು ಮೆಟ್ಟಿ ನಿಲ್ಲಲಿದೆ~ ಎಂದು ಭಾರತಕ್ಕೆ ಭೇಟಿ ನೀಡಿರುವ ಇಸ್ರೇಲ್ ಪ್ರವಾಸೋದ್ಯಮ ಸಚಿವ ಸ್ಟ್ಯಾಸ್ ಮಿಸೆಝ್ನಿಕೊವ್ ಹೇಳಿದ್ದಾರೆ.
ಪಾತಕಿಗಳು ಮಾತ್ರ ಸಮಾನತೆಯ ದೇಗುಲವಾದ ನ್ಯಾಯಾಲಯದ ಮೇಲೆ ದಾಳಿ ಎಸಗುತ್ತಾರೆ ಎಂದೂ ಅವರು ಖಂಡಿಸಿದರು.