ಸಚಿವರ ಕಾರ್ಯ ಮೌಲ್ಯಮಾಪನದ ಮಾತು ಕೆಪಿಸಿಸಿ ಅಧ್ಯಕ್ಷರು ಆಡುತ್ತಿರುವ ಕಾರಣ ಸಚಿವರ ಕಾರ್ಯ ವೈಖರಿ ಮತ್ತು ಪ್ರವಾಸದಲ್ಲಿ ಭಾರೀ ಬದಲಾವಣೆ ಆದಂತಿದೆ. ಚಿಕ್ಕಮಗಳೂರು ಜಿಲ್ಲೆಗೆ ಅದರಲ್ಲೂ ಚಿಕ್ಕಮಗಳೂರು ನಗರಕ್ಕೆ ಮಾತ್ರ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಈಗ ವಾರಕ್ಕೊಮ್ಮೆ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಅಲ್ಲದೇ ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳೂ ಇವೆ ಎಂಬ ವಿಷಯ ಮನಗಂಡು ತಾಲ್ಲೂಕು ಕೇಂದ್ರಗಳಿಗೂ ಭೇಟಿ ನಿಡುತ್ತಿದ್ದಾರೆ. ಈ ಬದಲಾವಣೆಗೆ ಕಾರಣರಾದವರಿಗೆ ಧನ್ಯವಾದಗಳು!