ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ಈಶ್ವರಪ್ಪ ವಿರುದ್ಧವೇ ಗುರುತರ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹಾಗೆಯೇ ಅವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡಲೇ ಉಪಮುಖ್ಯಮಂತ್ರಿ ಹುದ್ದೆಯಿಂದ ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಮುಖಂಡರಾದ ಆರ್. ಪ್ರಸನ್ನಕುಮಾರ್, ಎಚ್.ಎಂ. ಚಂದ್ರಶೇಖರಪ್ಪ, ಎಚ್.ಎಸ್. ಸುಂದರೇಶ್, ಬಲ್ಕೀಷ್ ಭಾನು, ವಿಜಯಲಕ್ಷ್ಮೀ ಪಾಟೀಲ್, ಆರ್. ಶಿವಕುಮಾರ್, ಸಿ. ರುದ್ರೇಶ್, ಆರ್. ಸತ್ಯನಾರಾಯಣ, ಯುವ ಮುಖಂಡರಾದ ಕೆ. ರಂಗನಾಥ್, ರುದ್ರೇಶ್, ಕಿರಣ್, ಗಿರೀಶ್, ರಂಜಿತ್, ಯೋಗೇಶ್, ಸಿದ್ದಪ್ಪ, ಚಂದ್ರಶೇಖರ್ ವಹಿಸಿದ್ದರು.