ಬೆಂಗಳೂರು: ಬೆಂಗಳೂರು ನೇತ್ರಾಲಯ ಆಸ್ಪತ್ರೆಯ ವತಿಯಿಂದ ಇದೇ ಭಾನುವಾರ (ಜ.5) ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಮಧುಮೇಹ ರೋಗಿಗಳಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿದೆ.
ಬನಶಂಕರಿ 2ನೇ ಹಂತದಲ್ಲಿನ ಆಸ್ಪತ್ರೆಯಲ್ಲಿ ಶಿಬಿರವು ನಡೆಯಲಿದ್ದು ಮಧುಮೇಹ ಸಂಬಂಧಿ ಕಣ್ಣಿನ ತೊಂದರೆ ಎದುರಿಸುತ್ತಿರುವವರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ : 2671 3763.