ಹುಬ್ಬಳ್ಳಿ: ನಗರದ ಉಣಕಲ್ ಕೆರೆ ಯಲ್ಲಿ ಈ ಬಾರಿ ಮೀನಿಗೆ ಬರವಿದೆ. ಟೆಂಡರ್ ಪಡೆದ ನಗರದ ಅಬ್ದುಲ್ ಹಮೀದ್ ಹೈರಾತಿ ಆಹ್ವಾನದ ಮೇರೆಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಬಂದ ಜಿ. ಶಂಕರ ನೇತೃತ್ವದ 16 ಜನರ ತಂಡ ಗುರುವಾರ ಇಲ್ಲಿಗೆ ಆಗಮಿಸಿದೆ.
ಕಮೀಷನ್ ಆಧಾರದ ಮೇಲೆ ಉಣ ಕಲ್ ಕೆರೆಯಲ್ಲಿ ತಂಡ ಬಲೆ ಹಾಕು ತ್ತಿದ್ದು, ಗುರುವಾರ ಸುಮಾರು 70 ಕಿಲೋ ಮೀನನ್ನು ಹಿಡಿದಿದೆ.
`ಕಳೆದ ವರ್ಷ ಒಂದು ತಿಂಗಳವರೆಗೆ ಇದ್ದೆವು. ಆದರೆ ಈ ಬಾರಿ ಅಷ್ಟೊಂದು ಮೀನುಗಳಿಲ್ಲ. ಸರಿಯಾಗಿ ಮೀನಿನ ಮರಿಗಳನ್ನು ಬೆಳೆಸಿಲ್ಲ.
ಹೀಗಾಗಿ ಈ ಬಾರಿ ಸೀಜನ್ ಸರಿಯಾಗಿ ಆಗುವುದಿಲ್ಲ. ಒಂದು ಸಲ ಬಲೆ ಹಾಕಿದರೆ ಎರಡರಿಂದ ಎರಡೂವರೆ ತಾಸು ಕಾಯಬೇಕು. ಪ್ರತಿ ಕಿಲೋ ಮೀನಿಗೆ 10 ರೂಪಾಯಿ ಕಮೀ ಷನ್ ಸಿಗುತ್ತದೆ. ಶುಕ್ರವಾರ 3 ಬಾರಿ ಬಲೆ ಹಾಕಿದೆವು. ಸುಮಾರು 2 ಟನ್ ಮೀನು ಸಿಕ್ಕಿತು. ಆದರೂ ಇದು ಕಡಿಮೆ. ಈ ವರ್ಷ ಬೇಗನೇ ಸೀಜನ್ ಮುಗಿ 2ಯುತ್ತದೆ' ಎನ್ನುತ್ತಾರೆ ಜಿ. ಶಂಕರ.