ಮಾಗಡಿ: `ಶಿಕ್ಷಕರು ಅರ್ಪಣಾ ಭಾವದಿಂದ ಮಕ್ಕಳಿಗೆ ಕಲಿಸಿದಾಗ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ' ಎಂದು ಅಂತರರಾಷ್ಟ್ರೀಯ ಕಂಸಾಳೆ ಕಲಾವಿದ ವಿ.ಎಸ್.ರಾಮಯ್ಯ ಹೇಳಿದರು.
ತಾವರೆಕೆರೆ ಶಾರದಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. `ಶಿಕ್ಷಕರು ವಿದ್ಯಾರ್ಥಿಗಳಿದ್ದಂತೆ. ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು' ಎಂದು ಅವರು ತಿಳಿಸಿದರು.
ಕಲಾವಿದ ಚಿಕ್ಕವೀರಯ್ಯ, ಚಳ್ಳಕೆರೆ ಚಿತ್ರಲಿಂಗಪ್ಪ, ವಾಣಿಜ್ಯ ತೆರಿಗೆ ಅಧಿಕಾರಿ ಸರೋಜಮ್ಮ, ರೇವಣಸಿದ್ದಯ್ಯ, ಮುನಿರಾಜು ಮಾತನಾಡಿದರು. ರಾಮಕೃಷ್ಣಯ್ಯ, ಪ್ರಾಂಶುಪಾಲ ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.