ಮನುಷ್ಯನ ಬದುಕಿಗೆ ಪ್ರಕೃತಿ, ಪರಿಸರ, ರಾಜಕೀಯ, ಧಾರ್ಮಿಕ ವಿದ್ಯಮಾನಗಳು ಮಾರ್ಗದರ್ಶನ ನೀಡುತ್ತವೆ. ಒಳ್ಳೆಯ ಪುಸ್ತಕಗಳ ಓದು, ನಾಟಕಗಳೂ ಕೂಡಾ ಪರಿಣಾಮ ಬೀರಿದ ಉದಾಹರಣೆಗಳು ಇವೆ ಎಂದು ನುಡಿದರು.
ವಚನಗಳು ಮಾನವೀಯ ಬದುಕನ್ನು ರೂಪಿಸುವ ನೀತಿ ಸಂಹಿತೆಯಾಗಿದೆ. ಅಂತೆಯೇ ಬಸವಣ್ಣನವರು ಸಾರಿದ ಮಾನವೀಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ, ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಸಿ. ಕುಮಾರಸ್ವಾಮಿ ಉಪಸ್ಥಿತರಿದ್ದರು. ರೇವಣಸಿದ್ದಪ್ಪ ಮತ್ತು ತಂಡದವರಿಂದ ವಚನಗಾಯನ ನಡೆಯಿತು.