ಬಳ್ಳಾರಿ: ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಉದ್ಯೋಗ, ಗುಣಮಟ್ಟದ ವಸತಿ, ಗುಣಮಟ್ಟದ ಆರೋಗ್ಯ ಸೇವೆ...ಈ ನಾಲ್ಕು ಪ್ರಮುಖ ಅಂಶಗಳ ಅನುಷ್ಠಾನಕ್ಕೆ ಒತ್ತು ನೀಡುವುದಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಶನಿವಾರ ನಗರದಲ್ಲಿ ಬಿಡುಗಡೆ ಮಾಡಿರುವ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಆಟೊರಿಕ್ಷಾ ಚಾಲಕ ಮೋಹನ್, ಗಾರೆ ಕೆಲಸದ ಕೆಂಚಣ್ಣ ಹಾಗೂ ಕೃಷಿಕ ಶಿವಯ್ಯ ಅವರಿಂದಲೇ ಪ್ರಣಾಳಿಕೆ ಬಿಡುಗಡೆ ಮಾಡಿಸಿದ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಬಡವ, ಶ್ರಮಿಕ, ರೈತರ ಹೆಸರಿನಲ್ಲಿ ಆರಂಭವಾಗಿರುವ ಪಕ್ಷ ಈ ವರ್ಗದವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
`ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎಂಬ ಸಿದ್ಧಾಂತದೊಂದಿಗೆ, `ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ'ಯ ಗುರಿ ಇರಿಸಿಕೊಂಡು, `ಆರ್ಥಿಕ ಸ್ವಾತಂತ್ರ್ಯ ಮತ್ತು ಹಣಕಾಸಿನ ಸ್ವಾವಲಂಬನೆ' ಕನಸಿನೊಂದಿಗೆ, `ಗ್ರಾಮೀಣ ಕರ್ನಾಟಕಕ್ಕೂ ಜಾಗತೀಕರಣದ ಸ್ಪರ್ಶ' ನೀಡುವ ಕ್ರಿಯಾ ಯೋಜನೆಯೊಂದಿಗೆ ಪಕ್ಷ 12 ಪುಟಗಳ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಅವರು ಹೇಳಿದರು.ಸಂಸದೆ ಜೆ.ಶಾಂತಾ, ಶಾಸಕ ಮೃತ್ಯುಂಜಯ ಜಿನಗಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಣಾಳಿಕೆಯ ಪ್ರಮುಖ ಅಂಶಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.