ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ ಯೋಜನೆ ಅಕ್ರಮ ತನಿಖೆಗೆ ತಂಡ

ಶಹಾಪುರ ಮತಕ್ಷೇತ್ರದ ಎಂಟು ಗ್ರಾಮ ಪಂಚಾಯಿತಿ
Last Updated 11 ಡಿಸೆಂಬರ್ 2013, 8:12 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಹೋತಪೇಟ, ಉಕ್ಕಿನಾಳ, ಚಾಮನಾಳ ಹಾಗೂ ಹೊಸ­ಕೇರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತು ಶಹಾಪುರ ಮತಕ್ಷೇತ್ರದ ಸುರ­ಪುರ ತಾಲ್ಲೂಕಿನ ಯಾಳಗಿ, ಕೆಂಭಾವಿ, ಮಲ್ಲಾ(ಬಿ) ಯಕ್ತಾಪುರ ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಗಳ ಕಾಮಗಾರಿ ಪರಿಶೀಲನೆಗೆ ಡಿ.11 ರಿಂದ 13ರ ವರೆಗೆ ಪಂಚಾಯ್ತಿ­ಗಳಿಗೆ ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾ­ಯತ್‌ ರಾಜ್ ಇಲಾಖೆಯ ವಿಶೇಷ ಆಯುಕ್ತರಾದ ಪ್ರಭಾಷ್‌ ಚಂದ್ರ ರೇ ವಿಶೇಷ ತಂಡವು ಸಂಚರಿಸಲಿದೆ.

ಶಾಸಕ ಗುರು ಪಾಟೀಲ್ ಶಿರವಾಳ ಅವರು ಶಹಾಪುರ ಮತಕ್ಷೇತ್ರದಲ್ಲಿ ಎಂಟು ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿನ ಕಾಮಗಾರಿಗಳ ಅವ್ಯವ­ಹಾರ­ಗಳಿಗೆ ಸಂಬಂಧಿಸಿದಂತೆ ಸಮಗ್ರ­ವಾಗಿ ತನಿಖೆ ನಡೆಸುವಂತೆ ಕಳೆದ 2013 ಅ.31ರಂದು ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ­ಯವರಿಗೆ ಕೋರಿದ ಹಿನ್ನೆಲೆಯಲ್ಲಿ ತಂಡ ಬರಲಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಯೋಜನೆ ದುರ್ಬಳಕೆ ಅಧಿಕವಾಗಿದೆ. ಸರ್ಕಾರದ ಅನುದಾನ ಸದ್ಬಳಕೆಯಾಗದೆ ಮುಗ್ಗರಿ­ಸಿದೆ. ಅದರಲ್ಲಿ ತಾಲ್ಲೂಕಿನ ಹೋತ­ಪೇಟ, ಚಾಮನಾಳ, ಉಕ್ಕಿನಾಳ, ಹೊಸಕೇರಾ ಗ್ರಾಮ ಪಂಚಾಯ್ತಿ­ಯಲ್ಲಿ ಸಂಪೂರ್ಣವಾಗಿ ವಿಫಲ­ವಾಗಿದೆ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾ­ಗಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಲಿವೆ.

ಆರೋಪ: ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯ ಅನುಷ್ಠಾನದಲ್ಲಿ ವ್ಯಾಪಕವಾಗಿ ಭ್ರಷ್ಟಾ­ಚಾರ ನಡೆದಿದೆ. ಗ್ರಾಮೀಣ ಪ್ರದೇಶದ ಸ್ಥಳೀಯ ರಾಜಕೀಯ ಮುಖಂಡರು ವ್ಯವಸ್ಥಿತವಾಗಿ ಖಾತರಿ ಕಾಮಗಾರಿಗೆ ಬೇಕಾಗುವ ದಾಖಲೆಗಳನ್ನು ಸಿದ್ಧಪಡಿಸಿ ಕಂಪ್ಯೂಟರ್‌ನಲ್ಲಿ ಅಪ್‌ಲೋಡ್‌ ಮಾಡಿ ವರದಿ ರವಾನಿಸಿ ಹಣ ಲಪಾಟಾಯಿ­ಸುವುದು ಸಾಮಾನ್ಯ­ವಾಗಿದೆ ಎಂದು ಕೃಷಿಕೂಲಿಕಾರ ಸಂಘದ ಜಿಲ್ಲಾ ಘಟಕ ಸಂಚಾಲಕ ದಾವಲಸಾಬ್ ನದಾಫ್‌ ಆರೋಪಿಸಿದ್ದಾರೆ.

ಖಾತರಿ ಅಕ್ರಮಕ್ಕೆ ಮೂಲ ನೆಲೆಯೆಂದರೆ ಆಯಾ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಅಪರೇಟ­ರ್‌ಗಳು ಆಗಿದ್ದಾರೆ. ನಂತರ ಅಂದಾಜು ಪತ್ರಿಕೆಯನ್ನು ಸಿದ್ಧಪಡಿಸಿ ಕಾಮಗಾರಿ ಅನುಮೋದನೆಯನ್ನು ಸಂಬಂಧಪಟ್ಟ ಎಂಜಿನಿಯರ್‌ ಪಡೆದುಕೊಂಡು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ವಾಸ್ತವ­ವಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಖಾತರಿ ಯೋಜನೆ ಅನುಷ್ಠಾನ ಕಾಮಗಾರಿ ಪರಿಶೀಲನೆ ನಡೆಸಿದರೆ ಅಕ್ರಮದ ನೈಜ ಚಿತ್ರಣ ಕಣ್ಣಿಗೆ ಕಾಣುತ್ತದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಸಂಪೂರ್ಣವಾಗಿ ಅಕ್ರಮ ಕೆಲಸಕ್ಕೆ ಸಾಥ್‌ ನೀಡುತ್ತಿರುವು­ದರಿಂದ ಉದ್ಯೋಗ ಖಾತರಿ ಯೋಜನೆ ಅನುಷ್ಠಾನವಾಗದೇ ಹಣ ಸಂಪಾದ­ನೆಯ ಖಾತರಿ ಯೋಜನೆ ಇದಾಗಿದೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT