ಈ ಕುರಿತು ಬಸವರಾಜ್ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮೊದಲೇ ನಡೆದ ಮಾತು-ಕತೆಯಂತೆ ಸೋಮವಾರ ಕಚೇರಿಗೆ ತೆರಳಿದ ಬಸವರಾಜ್ ₨ 10 ಸಾವಿರ ಲಂಚವನ್ನು ವೆಂಕಟರಾಮು ಅವರಿಗೆ ನೀಡಿದರು. ತಕ್ಷಣವೇ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಆರೋಪಿಯ ಗಿರಿನಗರದ ಮನೆಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್ಪಿಗಳಾದ ವಿ.ಪಿ.ಎಂ.ಸ್ವಾಮಿ, ಡಿ.ಫಾಲಾಕ್ಷಯ್ಯ, ಇನ್ಸ್ಪೆಕ್ಟರ್ಗಳಾದ ಎನ್.ಜಿ.ಶಿವಶಂಕರ್ ಮತ್ತು ಅನಿಲ್ ಗ್ರಾಮಪುರೋಹಿತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.