ಬಾಂಬೆ ರೆಯಾನ್ ಫ್ಯಾಷನ್ಸ್ ಲಿಮಿಟೆಡ್ ಸಿದ್ಧ ಉಡುಪು ಕಾರ್ಖಾನೆಯ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ನಳಿನಿ (25) ಮೃತಪಟ್ಟವರು. ಮೂಲತಃ ಗೌರಿಬಿದನೂರಿನ ಚಿಟ್ಟವಲಹಳ್ಳಿ ಗ್ರಾಮದ ಅವರು ಸಹೋದರ ಹರೀಶ್ ಜತೆ ನಗರದ ಕೊಡಿಗೇಹಳ್ಳಿಯ ಸಂಜೀವಿನಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷಿಕರಾದ ರಾಮಕೃಷ್ಣರೆಡ್ಡಿ ಹಾಗೂ ಲಕ್ಷ್ಮಿದೇವಮ್ಮ ದಂಪತಿಯ ಮಗಳಾದ ನಳಿನಿ, ಬೆಂಗಳೂರಿನ ಶಂಕರಮಠ ಸಮೀಪದ ಅನುಪಮಾ ಕಾಲೇಜಿನಲ್ಲಿ ಎಂಎಸ್ಡಬ್ಲ್ಯೂ ಓದಿದ್ದರು. ಅವರು ಒಂದೂವರೆ ವರ್ಷದ ಹಿಂದೆ ಬಾಂಬೆ ರೆಯಾನ್ ಫ್ಯಾಷನ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಾರ್ಮಿಕ ಕಲ್ಯಾಣಾಧಿಕಾರಿಯಾಗಿ ಸೇರಿದ್ದರು.