ಪ್ರಾಂಶುಪಾಲ ಬಸವಣ್ಣ ಮಾತನಾಡಿ, ಕಾಲೇಜಿನ ಫಲಿತಾಂಶ ಹಾಗೂ ಕಾಲೇಜಿನಲ್ಲಿ ನಡೆದ ವಾರ್ಷಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿನಿಯರಿಗೆ ವಕೀಲ ತಾಂಡವೇಶ್ವರ್ ಬಹುಮಾನ ವಿತರಿಸಿದರು. ಎನ್ಎಸ್ಎಸ್ ಅಧಿಕಾರಿ ರಾಜಶೇಖರ್ ವಾರ್ಷಿಕ ವರದಿ ಓದಿದರು. ಸಿಂಧು ಕಾರ್ಯಕ್ರಮ ನಿರೂಪಿಸಿದರು.