ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಲೋಕಾಯುಕ್ತರ ಭೇಟಿ

Last Updated 14 ಸೆಪ್ಟೆಂಬರ್ 2013, 10:15 IST
ಅಕ್ಷರ ಗಾತ್ರ

ರಾಯಬಾಗ: ತಾಲ್ಲೂಕಿನ ಹಂದಿಗುಂದ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಉಪ ಲೋಕಾಯುಕ್ತ ಎಸ್‌.ವಿ. ಮಜ್ಜಗಿ ಗ್ರಾಮಸ್ಥರ ದೂರಿನನ್ವಯ ಇತ್ತೀಚಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ಹೊಸೂರ ರಸ್ತೆ ಕಾಮ­ಗಾರಿ, ರುದ್ರಭೂಮಿ, ಕಟ್ಟಡ, ಸಂಚಾರಿ ವೈದ್ಯಕೀಯ ಆಸ್ಪತ್ರೆ, ಗ್ರಾಮ ಪಂಚಾ­ಯ್ತಿಯಿಂದ ನಿರ್ಮಿಸಲಾದ ಚರಂಡಿ ಕಾಮ­ಗಾರಿಗಳನ್ನು ವೀಕ್ಷಿಸಿದರು. ಗ್ರಾಮದ ಮನೆಗಳ ಮುಂದೆ ನಿಂತ ಕೊಳಚೆ ನೀರು ಗಬ್ಬು ನಾರು­ತ್ತಿರು­ವು­ದನ್ನು ಗಮನಸಿದ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ದೇವರವರ ಹಾಗೂ ಪಿ.ಡಿ.ಒ ಬಿ.ವಿ. ಮಸಾಲಜಿ ಅವರನ್ನು ತರಾಟೆಗೆ ತೆಗೆದು­ಕೊಂಡರು. ಕೂಡಲೇ  ಫಾಗಿಂಗ್‌  ಮಾಡು­ವಂತೆ ಸೂಚಿಸಿದರು.

ಜಿಲ್ಲಾ ಲೋಕಾಯುಕ್ತ ಜಿ.ಆರ್‌. ಪಾಟೀಲ, ಬಿ.ಎಸ್‌. ಪಾಟೀಲ, ತಾ.ಪಂ. ಅಧಿಕಾರಿ ವೀರಣ್ಣ ವಾಲಿ, ಗೌಡಪ್ಪ ಪಾಟೀಲ, ಹನಮಂತ ನಾವಿ, ಸದಾಶಿವ ಬುರ್ಜಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT