ಚೆನ್ನೈ(ಐಎಎನ್ಎಸ್): ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ 136 ಭಾರತೀಯ ಮೀನುಗಾರರು 25 ದೋಣಿಗಳಲ್ಲಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಗೆ ಶನಿವಾರ ಆಗಮಿಸಿದರು.
ಬಿಡುಗಡೆಗೊಂಡ ಮೀನುಗಾರರನ್ನು ಅವರ ಕುಟುಂಬ ಮತ್ತು ಗ್ರಾಮಸ್ಥರು ಬರಮಾಡಿಕೊಂಡರು. ಈ ಎಲ್ಲ ಮೀನುಗಾರರು ತಮಿಳುನಾಡಿನ ನಾಗಪಟ್ಟಿಣಂ ಹಾಗೂ ಪುದುಕೊಟ್ಟೈ ಜಿಲ್ಲೆಯವರು.