ರಾಜ್ಯದ ಪಂಚಾಯಿತಿಗಳಲ್ಲಿ 15.823 ಮಂದಿ ಅನಕ್ಷರಸ್ಥ ಪ್ರತಿನಿಧಿಗಳಿದ್ದಾರೆ (ಪ್ರಜಾವಾಣಿ ಡಿ.19) ಎಂದು ಓದಿ ಆಶ್ಚರ್ಯವಾಯಿತು, ಈ ಅನಕ್ಷರಸ್ಥರು ಕೆಲವು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್, ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ಇತರೇ ಸರ್ಕಾರಿ ಅಧಿಕಾರಿಗಳ ಬಳಿ ಮಾತನಾಡಿ ಪತ್ರ ವ್ಯವಹಾರ ಮಾಡಬೇಕಾಗುತ್ತದೆ. ಪಂಚಾಯಿತಿಗಳಲ್ಲಿ ನಿರ್ಣಯಗಳನ್ನು ಮಾಡಬೇಕು ಮತ್ತು ಅದರಲ್ಲಿ ಸರಿಯಾಗಿ ಬರೆದಿದ್ದಾರೆಯೇ ಎಂದು ಓದಿ ಸಹಿ ಮಾಡಬೇಕಾಗುತ್ತದೆ. ಓದಲು ಬಾರದಿದ್ದರೆ?
ಇತರರು ಏನೂ ತಪ್ಪು ಬರೆದಿದ್ದರೂ, ಕಣ್ಣು ಮುಚ್ಚಿಕೊಂಡು ಸಹಿ ಮಾಡಬೇಕು, ಈ ರೀತಿ ಆದರೆ ಪಂಚಾಯಿತಿ ಆಡಳಿತವನ್ನು ಹೇಗೆ ನಡೆಸುತ್ತಾರೆ?ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರು ಪದವೀಧರರಲ್ಲದೆ ಹೋದರೂ ಕನಿಷ್ಟ ಎಂಟನೇ ತರಗತಿಯಾದರೂ ಓದಿರಬೇಕೆಂದು ಕಾನೂನು ಮಾಡಿದರೆ ಒಳ್ಳೆಯದು.