ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ವಿಪರ್ಯಾಸ!

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಮಾತನಾಡುವುದು ರಾಷ್ಟ್ರೀಯತೆ ಬಗ್ಗೆ; ಮಣೆ ಹಾಕುವುದು ಜಾತಿವಾದಕ್ಕೆ!
ಹೇಳಿಕೊಳ್ಳುವುದು ತಾನು ಸ್ಥಿರ ಸರ್ಕಾರವೆಂದು; ನಾಲ್ಕು ವರ್ಷಗಳಲ್ಲಿ ಮೂರನೇ ಮುಖ್ಯಮಂತ್ರಿ ರೆಡಿ!

ಕರೆದು ಕೊಳ್ಳುವುದು ತನ್ನನ್ನು ಶಿಸ್ತಿನ ಪಕ್ಷವೆಂದು; ಅದೇ ವೇಳೆ, ಮುಖ್ಯಮಂತ್ರಿಯನ್ನು ನಿಂದಿಸುತ್ತ ದಿನ ಕಳೆದ ಸಚಿವರ ವಿರುದ್ಧ ಶಿಸ್ತು ಕ್ರಮದ ಬದಲು ಅವರ (ಅಸಡ್ಡಾಳ) ಮಾತಿಗೆ ಮನ್ನಣೆ!

`ತುರ್ತು ಪರಿಸ್ಥಿತಿ~ ವಿರೋಧಿಸಿ ಜೈಲಿಗೆ ಹೋಗಿಬಂದವರ ಪಕ್ಷ; ಅಂಥ ಪಕ್ಷವೀಗ, ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದಾತನಿಗೆ ಶರಣು!
ಹೈಕಮಾಂಡ್‌ನಲ್ಲಿ, ಪ್ರಧಾನಿ ಹುದ್ದೆಗೆ ಯೋಗ್ಯರಾದ ಹಲವರಿದ್ದಾರಂತೆ; ಲೋಕಮಾಂಡ್‌ನ ಸದಸ್ಯನೊಬ್ಬನನ್ನು ಅಂಕೆಯಲ್ಲಿಡುವಷ್ಟು ಸಾಮರ್ಥ್ಯ ಹೊಂದಿರುವವರು ಒಬ್ಬರೂ ಇಲ್ಲ! ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪಟ್ಟಕ್ಕೇರಿದ ಪಕ್ಷದ `ಸಾಧನೆ~ ಇದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT