ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹಾಗೂ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಆಶ್ರಯದಲ್ಲಿ ಆರನೇ ಎಜುಯೂನಿವರ್ಸಲ್ ವಿಶ್ವ ಸಮ್ಮೇಳನ ಅ. 9ರಿಂದ 12ರ ವರೆಗೆ ನಗರದಲ್ಲಿ ನಡೆಯಲಿದೆ.
ಸಮ್ಮೇಳನವನ್ನು ಐಐಎಂನ ನಿರ್ದೇಶಕ ದೇವನಾಥ್ ತಿರುಪತಿ ಉದ್ಘಾಟಿಸುವರು. ಎಜುಯುನಿವರ್ಸಲ್ ಸಂಸ್ಥಾಪಕ ಮಾರ್ಟಿಯಲ್ ಗಯೆಟ್ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಸಮ್ಮೇಳನದಲ್ಲಿ ಶಿಕ್ಷಕ ತಜ್ಞರು, ಡೀನ್ಗಳು, ವೃತ್ತಿಪರರನ್ನು ಒಂದೇ ವೇದಿಕೆಯಡಿ ತಂದು ಶಿಕ್ಷಕ ಕ್ಷೇತ್ರದ ಸವಾಲುಗಳ ಬಗ್ಗೆ ಚರ್ಚಿಸಲು ಅನುವು ಮಾಡಿಕೊಡಲಾಗುವುದು. ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಮೇಲಾಗಿರುವ ಆರ್ಥಿಕ ಪ್ರಭಾವ ಹಾಗೂ ಸಾಮಾಜಿಕ ಸವಾಲುಗಳು, ಏಷ್ಯಾದ ಉನ್ನತ ಶಿಕ್ಷಣ–ಸವಾಲುಗಳು, ಏಕಕಾಲಕ್ಕೆ ಎರಡು ಪದವಿ ಕಲಿಕೆ– ಸವಾಲುಗಳು ವಿಷಯಗಳ ಕುರಿತು ಚರ್ಚೆ ಆಯೋಜಿಸಲಾಗಿದೆ.
ಮಾಹಿತಿಗಾಗಿ ವೆಬ್ಸೈಟ್ (http:convention.eduuniversal.com) ಅಥವಾ ರಾಕೇಶ್
ಗೋದ್ವಾನಿ (Rakesh. Godhwani@iibm.ernet.in) ಅವರನ್ನು ಸಂಪರ್ಕಿಸಬಹುದು.