<p>ಬೆನ್ನ ಮೇಲೆ<br /> ಹೊರೆ ಹೊತ್ತ ಎತ್ತು<br /> ಸಾಗುತಿದೆ<br /> ಶಿಲುಬೆಯನು ಹೊತ್ತ<br /> ಏಸು ಕ್ರಿಸ್ತನಂತೆ!</p>.<p>ಆಗಸದ ಬಿಸಿಲ ಬಾಣಲೆಯಿಂದ<br /> ನಿಷ್ಕರುಣಿ ರವಿ<br /> ಉರಿದು ಕೆಡಹುವನು<br /> ಕೆಂಡದುಂಡೆಗಳನು<br /> ತಲೆಗೆ ತೊಡಿಸಿರುವ<br /> ಮುಳ್ಳ ಕಿರೀಟದಂತೆ.</p>.<p>ಸಂತೆ ಮುಗಿಯಲಿನ್ನೂ<br /> ಸಾಕಷ್ಟು ಸಮಯವಿದೆ<br /> ಇಗರ್ಜಿಯ ಗೋಪುರದ ಗಡಿಯಾರ<br /> ಬಾರಿಸುತ್ತಿದೆ ಗಂಟೆ ಹನ್ನೆರಡನು<br /> ಹಗಲಿನೆದೆಗೇ ಗುರಿಯಿಟ್ಟ ಗುಂಡಿನಂತೆ!</p>.<p>ಕಂತೆ ಎತ್ತುವ ತನಕ<br /> ಸಂತೆ ಪೇಟೆಗೆ ಸರಕು<br /> ಸಾಗಿಸಲೇ ಬೇಕು<br /> ಹೆಗಲುಗಳು ನೋಯುತಿವೆ<br /> ಶಿಲುಬೆಗೇರಿಸಿದ ಗಾಯದಂತೆ!</p>.<p><br /> ಸಂಜೆ ಆರರ ಬಿಸಿಲು<br /> ಮಂದಿರ ಮಸೀದಿಗಳ ತುಂಬಾ<br /> ಮಂಡಿಯೂರಿದ ಭಕ್ತರ<br /> ಧ್ಯಾನಸ್ಥ ಮೌನದಲಿ<br /> ಜಗದೆಲ್ಲ ಪಾಪಿಗಳ ಲೆಕ್ಕವನು ಅಳಿಸುತಿಹುದು</p>.<p>ಭಾರವನು ಹೊತ್ತು<br /> ಸಾಗಲಾರದ ಎತ್ತು<br /> ಮಂಡಿ ಊರಿದ ಹೊತ್ತು<br /> ಅದರ ಬೆನ್ನ ಮೇಲೆಲ್ಲಾ<br /> ಮೂಡಿರುವ ಬಾಸುಂಡೆ ಬರೆಗಳು<br /> ಕಾಣುತಿವೆ, ಮನುಕುಲದ ಕ್ರೌರ್ಯಕ್ಕೆ<br /> ಬರೆದಿರುವ ನೆತ್ತರ ಭಾಷ್ಯದಂತೆ!</p>.<p><br /> ಬಾಯೊಳಗೆ ನೊರೆಗರೆವ ಬುರುಗು<br /> ಕಣ್ಣೊಳಗೆ ದೈನ್ಯತೆಯ ಕೊರಗು<br /> ತನಗೆ ಹುಲ್ಲು ನೀರಿಟ್ಟು<br /> ಪ್ರಾಣ ಕಾಪಿಟ್ಟ ಧಣಿಯ<br /> ಪಾಪಿಷ್ಟ ಹಸಿವಿನ ಋಣವ<br /> ತೀರಿಸಬಲ್ಲೆನು ನಾನು.<br /> ಅವನ<br /> ಚಾಟಿ ಏಟಿನ ಋಣವ<br /> ನೀನೇ ತೀರಿಸೋ ಪ್ರಭುವೇ ಎಂದು<br /> ಕಣ್ಣ ನೀರನು ಸುರಿಸುತಿದೆ<br /> ಶಿಲುಗೇರಿದ ಕ್ರಿಸ್ತನಂತೆ.</p>.<p><br /> ಜಗದ ಪಾಪದ ಶಿಲುಬೆಯನು<br /> ಬೆನ್ನ ಮೇಲೆಯೇ ಹೊತ್ತು<br /> ಸಾಗುತಿದೆ ಎತ್ತು<br /> ಈಗಲೂ ನಮ್ಮೆದೆಯ<br /> ಬೀದಿ ಬೀದಿಗಳಲ್ಲಿ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬೆನ್ನ ಮೇಲೆ<br /> ಹೊರೆ ಹೊತ್ತ ಎತ್ತು<br /> ಸಾಗುತಿದೆ<br /> ಶಿಲುಬೆಯನು ಹೊತ್ತ<br /> ಏಸು ಕ್ರಿಸ್ತನಂತೆ!</p>.<p>ಆಗಸದ ಬಿಸಿಲ ಬಾಣಲೆಯಿಂದ<br /> ನಿಷ್ಕರುಣಿ ರವಿ<br /> ಉರಿದು ಕೆಡಹುವನು<br /> ಕೆಂಡದುಂಡೆಗಳನು<br /> ತಲೆಗೆ ತೊಡಿಸಿರುವ<br /> ಮುಳ್ಳ ಕಿರೀಟದಂತೆ.</p>.<p>ಸಂತೆ ಮುಗಿಯಲಿನ್ನೂ<br /> ಸಾಕಷ್ಟು ಸಮಯವಿದೆ<br /> ಇಗರ್ಜಿಯ ಗೋಪುರದ ಗಡಿಯಾರ<br /> ಬಾರಿಸುತ್ತಿದೆ ಗಂಟೆ ಹನ್ನೆರಡನು<br /> ಹಗಲಿನೆದೆಗೇ ಗುರಿಯಿಟ್ಟ ಗುಂಡಿನಂತೆ!</p>.<p>ಕಂತೆ ಎತ್ತುವ ತನಕ<br /> ಸಂತೆ ಪೇಟೆಗೆ ಸರಕು<br /> ಸಾಗಿಸಲೇ ಬೇಕು<br /> ಹೆಗಲುಗಳು ನೋಯುತಿವೆ<br /> ಶಿಲುಬೆಗೇರಿಸಿದ ಗಾಯದಂತೆ!</p>.<p><br /> ಸಂಜೆ ಆರರ ಬಿಸಿಲು<br /> ಮಂದಿರ ಮಸೀದಿಗಳ ತುಂಬಾ<br /> ಮಂಡಿಯೂರಿದ ಭಕ್ತರ<br /> ಧ್ಯಾನಸ್ಥ ಮೌನದಲಿ<br /> ಜಗದೆಲ್ಲ ಪಾಪಿಗಳ ಲೆಕ್ಕವನು ಅಳಿಸುತಿಹುದು</p>.<p>ಭಾರವನು ಹೊತ್ತು<br /> ಸಾಗಲಾರದ ಎತ್ತು<br /> ಮಂಡಿ ಊರಿದ ಹೊತ್ತು<br /> ಅದರ ಬೆನ್ನ ಮೇಲೆಲ್ಲಾ<br /> ಮೂಡಿರುವ ಬಾಸುಂಡೆ ಬರೆಗಳು<br /> ಕಾಣುತಿವೆ, ಮನುಕುಲದ ಕ್ರೌರ್ಯಕ್ಕೆ<br /> ಬರೆದಿರುವ ನೆತ್ತರ ಭಾಷ್ಯದಂತೆ!</p>.<p><br /> ಬಾಯೊಳಗೆ ನೊರೆಗರೆವ ಬುರುಗು<br /> ಕಣ್ಣೊಳಗೆ ದೈನ್ಯತೆಯ ಕೊರಗು<br /> ತನಗೆ ಹುಲ್ಲು ನೀರಿಟ್ಟು<br /> ಪ್ರಾಣ ಕಾಪಿಟ್ಟ ಧಣಿಯ<br /> ಪಾಪಿಷ್ಟ ಹಸಿವಿನ ಋಣವ<br /> ತೀರಿಸಬಲ್ಲೆನು ನಾನು.<br /> ಅವನ<br /> ಚಾಟಿ ಏಟಿನ ಋಣವ<br /> ನೀನೇ ತೀರಿಸೋ ಪ್ರಭುವೇ ಎಂದು<br /> ಕಣ್ಣ ನೀರನು ಸುರಿಸುತಿದೆ<br /> ಶಿಲುಗೇರಿದ ಕ್ರಿಸ್ತನಂತೆ.</p>.<p><br /> ಜಗದ ಪಾಪದ ಶಿಲುಬೆಯನು<br /> ಬೆನ್ನ ಮೇಲೆಯೇ ಹೊತ್ತು<br /> ಸಾಗುತಿದೆ ಎತ್ತು<br /> ಈಗಲೂ ನಮ್ಮೆದೆಯ<br /> ಬೀದಿ ಬೀದಿಗಳಲ್ಲಿ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>