ನವದೆಹಲಿ (ಪಿಟಿಐ): ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ)ಗೆ ಬಹು-ಉದ್ದೇಶಿತ ಚಿಲ್ಲರೆ ವ್ಯಾಪಾರವನ್ನು ಮುಕ್ತವಾಗಿಸುವ ಮತ್ತು ರಕ್ಷಣೆಯಂತಹ ಇತರ ಕ್ಷೇತ್ರಗಳ ಆಡಳಿತವನ್ನು ಉದಾರೀಕರಣಗೊಳಿಸುವ ಬೇಡಿಕೆಗಳ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ‘ವಿದೇಶದಿಂದ ಬಂಡವಾಳ ಹರಿದು ಬರುವಂತಹ ಅನುಕೂಲಕರ ಪರಿಸರವನ್ನು ದೇಶದಲ್ಲಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ’ ಎಂದು ನುಡಿದರು.