ಪತ್ರಕರ್ತರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಅವರು, `ಎಫ್ಡಿಐನಿಂದಾಗಿ ಗ್ರಾಹಕರಿಗೆ ಹೆಚ್ಚು ವಸ್ತುಗಳು ದೊರೆಯುತ್ತವೆ. ಅವರಿಗೆ ಆಯ್ಕೆಯ ಅವಕಾಶವೂ ಸಿಗಬಹುದು. ಆದರೆ ಉತ್ಪಾದಕರಿಗೆ ಹೊಡೆತ ಬೀಳುತ್ತದೆ. ಸಣ್ಣ ವ್ಯಾಪಾರಸ್ಥರಿಗೂ ಇದರಿಂದ ನಷ್ಟವಾಗಲಿದೆ.
ಈಗಿರುವ ಸಾಂಪ್ರದಾಯಿಕ ವಿತರಣಾ ವ್ಯವಸ್ಥೆಯೂ ಬದಲಾಗಲಿದೆ~ ಎಂದು ದೇಶದ ಮಾರುಕಟ್ಟೆಯ ಮೇಲಾಗುವ ಪರಿಣಾಮಗಳನ್ನು ವಿಶ್ಲೇಷಿಸಿದರು.
ಸಿದ್ಧ ಆಹಾರ ಅನಿವಾರ್ಯ: ಈಗ ಸರ್ಕಾರ ಅಡುಗೆ ಅನಿಲ ಸಿಲಿಂಡರ್ಗಳ ವಿತರಣೆ ಮೇಲೆ ನಿರ್ಬಂಧ ಹೇರಿರುವುದನ್ನು ನೋಡಿದರೆ, ಮುಂದಿನ ಹತ್ತು ವರ್ಷಗಳಲ್ಲಿ ಸಿಲಿಂಡರ್ ವಿತರಣೆಯೇ ಬಂದ್ ಆಗಬಹುದು ಎಂದೆನಿಸುತ್ತದೆ. ಆಗ `ಸಿದ್ಧ ಆಹಾರ~ ಜನರಿಗೆ ಅನಿವಾರ್ಯವಾಗಬಹುದು ಎಂದು ಅವರು ಚಟಾಕಿ ಹಾರಿಸಿದರು.
ಇದೇ 17ರಿಂದ ಉತ್ತರ ಕರ್ನಾಟಕದ ಭಾಗದ ಜನರಿಗೆ ಮಯ್ಯಾಸ್ ಉತ್ಪನ್ನಗಳು ದೊರೆಯಲಿವೆ ಎಂದು ಅವರು ಹೇಳಿದರು.
`ನಮ್ಮಲ್ಲಿ ಆಹಾರ ಸಂಸ್ಕೃತಿ ಇದ್ದರೂ ಅದನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಕೊರತೆ ಇದೆ. ಮಯ್ಯಾ ಅವರು ಆಹಾರ ಉತ್ಪಾದನೆ ಜೊತೆಗೆ ಆಹಾರ ತಂತ್ರಜ್ಞಾನ ಶಿಕ್ಷಣದ ಪ್ರಸಾರವನ್ನೂ ಮಾಡುತ್ತಿದ್ದಾರೆ~ ಎಂದು ಕಲಾವಿದ ಯಶವಂತ ಸರದೇಶಪಾಂಡೆ ಹೇಳಿದರು. ಸಾಹಿತ್ಯ ಪ್ರಕಾಶನದ ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.