ಹೀಗಾಗಿ, ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಮಾಡಿದೆ. ರಾಜಕೀಯ ಕಾರಣಕ್ಕೆ ನಾಡಿನ ನೆಲ-ಜಲ ಕೈತಪ್ಪುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅವರು ಹೇಳಿದರು.
ಬಯಲುಸೀಮೆಯ ಜನರ ನೀರಿನ ಹಾಗೂ ಇತರ ಸಮಸ್ಯೆಗಳ ಅರಿವು ಇದ್ದು, ಸೂಕ್ತ ಕಾಲದಲ್ಲಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಲಾಗುವುದು. ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಯಾದವರು- ಒಕ್ಕಲಿಗರು ಒಗ್ಗಟ್ಟಾಗಿರುವುದು ರಾಜಕೀಯ ವಿಚಾರದಲ್ಲಿ ಕಾಣುತ್ತಿರುವ ಮಹತ್ತರ ಬದಲಾವಣೆ ಎಂದರು.
ಹಿರಿಯೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎ. ಕೃಷ್ಣಪ್ಪ, ಎನ್.ಆರ್. ಲಕ್ಷ್ಮೀಕಾಂತ್, ಸುಮೇರ್ಮಲ್ಷಾ, ಡಿ. ಯಶೋಧರ, ಶಿವಪ್ರಸಾದಗೌಡ, ಕೆ. ಶಂಕರಮೂರ್ತಿ, ಎಸ್. ಗಿರಿಜಪ್ಪ,ಕೆ. ವಿಶ್ವನಾಥ್, ಎಂ.ಓ. ಮಂಜುನಾಥ್, ಎಚ್. ವೆಂಕಟೇಶ್, ಎಚ್.ಆರ್. ತಿಮ್ಮಯ್ಯ, ಪಿಟ್ಲಾಲಿ ಕರಿಬಸಣ್ಣ, ಜೆ.ಆರ್. ಸುಜಾತಾ ಮತ್ತಿತರರು ಹಾಜರಿದ್ದರು.
ಜೆಡಿಎಸ್ಗೆ ಸೇರ್ಪಡೆ: ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಆರ್. ಗೋಪಾಲ್, ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ. ಉಗ್ರಮೂರ್ತಿ, ಎಂ.ಓ. ಮಂಜುನಾಥ್, ಮೂಡಲಗಿರಿಯಪ್ಪ, ಮೂರ್ತಿ, ರಾಜಪ್ಪ, ಚಂದ್ರಪ್ಪ, ಹನುಮಂತಪ್ಪ, ತಿಪ್ಪಣ್ಣ ಮತ್ತಿತರರು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.