ಕೆಜೆಪಿ ನಾಯಕರು ಬಿಜೆಪಿಯಿಂದ ಪ್ರತ್ಯೇಕಗೊಂಡಾಗ ಪ್ರಾದೇಶಿಕ ಪಕ್ಷವನ್ನು ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಮುಂದೆ, ಜನಸಾಮಾನ್ಯರ ಮುಂದೆ ರೋಷಾವೇಶದಿಂದ ಆಡಿದ ಮಾತುಗಳು ಎಲ್ಲಿ ಹೋದವು?
ಕೆಜೆಪಿ ಬೇರು ಇಳಿಸುವ ಮುನ್ನವೇ, ಅದು ಬೆಳೆಯುವ ಮೊದಲೇ ಜನರು ಅದನ್ನು ಬೇರುಸಮೇತ ಕಿತ್ತು ಎಸೆದಿದ್ದಾರೆ. ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಈ ನಾಯಕರಲ್ಲಿ ಇಲ್ಲವೇ? ಅಥವಾ ಆರಂಭದಲ್ಲಿದ್ದ ಶಕ್ತಿ ಒಂದೇ ಚುನಾವಣೆಯಿಂದ ಉಡುಗಿ, ಸತ್ತು ಹೋಯಿತೇ? ಈ ಪಕ್ಷದ ನಾಯಕರು ಆಡಿದ ಮಾತುಗಳಿಗೆ ಬೆಲೆ ಇಲ್ಲವೇ?