ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಎಂಎಸ್ ಮೂಲಕ ಬಾನುಲಿ ಸುದ್ದಿ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಕಾಶವಾಣಿ ಇನ್ನು ಮುಂದೆ ಎಸ್ಎಂಎಸ್‌ ಸೇವೆಯ ಮೂಲಕ ಗ್ರಾಹಕರಿಗೆ ಪ್ರಮುಖ ಹಾಗೂ ಹೊಸ ಸುದ್ದಿಗಳನ್ನು ನೀಡಲಿದೆ. ಮಾಹಿತಿ ಮತ್ತು ವಾರ್ತಾ ಸಚಿವ ಮನೀಷ್‌ ತಿವಾರಿ ಅವರು ಸೋಮವಾರ ಈ ಸೇವೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಭಾರತ್‌ ನಿರ್ಮಾಣ್‌ ಅಭಿಯಾನದ ವೆಬ್‌­ಸೈಟ್‌ನ್ನೂ ಉದ್ಘಾಟಿಸಿದರು. ಈ ಸೇವೆಯನ್ನು ಪಡೆಯಲು ಗ್ರಾಹಕರು AIRNEWS ಎಂದು ಟೈಪ್‌ ಮಾಡಿ, ಹೆಸರನ್ನು ಬರೆದು 08082080820 ಸಂಖ್ಯೆಗೆ ಎಸ್‌ಎಂಎಸ್‌ ಮಾಡಬೇಕು. ಅಥವಾ ಇದೇ ಸಂಖ್ಯೆಗೆ ಮಿಸ್ಡ್ ಕಾಲ್‌ ಕೂಡ ಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT