ಬೆಂಗಳೂರು: ಐಎಎಸ್ ಅಧಿಕಾರಿಯೂ ಆದ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಎಸ್.ದಯಾಶಂಕರ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.
ಈ ಸಂಬಂಧ ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದ್ದು, ಒಂದೆರಡು ದಿನದಲ್ಲಿ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಲಿದ್ದಾರೆ ಎಂದು ಗೊತ್ತಾಗಿದೆ.
ಕೆಪಿಎಸ್ಸಿ ಸದಸ್ಯರಾಗಿದ್ದ ಎಸ್.ರುದ್ರೇಗೌಡ ಇದೇ 8ರಂದು ನಿವೃತ್ತಿಯಾಗಿದ್ದು, ಆ ಜಾಗಕ್ಕೆ ದಯಾಶಂಕರ್ ಅವರನ್ನು ನೇಮಿಸಲು ತೀರ್ಮಾನಿಸಲಾಗಿದೆ. ನಿವೃತ್ತಿಯಾದ ರುದ್ರೇಗೌಡ ಲಿಂಗಾಯತರು. ಈ ಕಾರಣಕ್ಕೆ ಅದೇ ಸಮುದಾಯದ ದಯಾಶಂಕರ್ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆ.ಎ.ಎಸ್ಯೇತರ ಅಧಿಕಾರಿಯಾಗಿದ್ದ ಅವರಿಗೆ ಐಎಎಸ್ಗೆ ಬಡ್ತಿ ನೀಡಲಾಗಿತ್ತು. ಇವರ ಸೇವಾವಧಿ ಇನ್ನೂ ಮೂರುವರೆ ವರ್ಷ ಇದೆ. ಸದಸ್ಯರಾಗಿ ನೇಮಕವಾದರೆ ಅವರಿಗೆ ಆರು ವರ್ಷ ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ.